ನವದೆಹಲಿ: ಚಿಕಿತ್ಸೆ ವೇಳೆ ನಿರ್ಲಕ್ಷ್ಯದ ಕಾರಣದಿಂದ ರೋಗಿಯ ಸಾವು ಸಂಭವಿಸಿದ ಸಂದರ್ಭದಲ್ಲಿ ವೈದ್ಯರಿಗೆ ವಿಧಿಸುತ್ತಿದ್ದ ಜೈಲು ಶಿಕ್ಷೆ ಅವಧಿಯನ್ನು ಕಡಿಮೆಗೊಳಿಸುವ ಅಂಶವನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾದ ಭಾರತೀಯ ನ್ಯಾಯ (ಎರಡನೆಯ) ಸಂಹಿತೆ ತಿದ್ದುಪಡಿ ಮಸೂದೆಯು ಒಳಗೊಂಡಿದೆ.
ನಿರ್ಲಕ್ಷ್ಯದಿಂದಾಗಿ ರೋಗಿಯು ಮೃತಪಟ್ಟರೆ ಶಿಕ್ಷಾರ್ಹ ಹತ್ಯೆ ಎಂದು ಪರಿಗಣಿಸಲಾಗುತ್ತದೆ. ತಿದ್ದುಪಡಿ ಮಸೂದೆಯು ಈ ಜೈಲು ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸುವ ಅವಕಾಶವನ್ನು ಒಳಗೊಂಡಿದೆ.
ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ವಿಚಾರವಾಗಿ ಭಾರತೀಯ ವೈದ್ಯಕೀಯ ಸಂಘವು ತಮಗೆ ಪತ್ರ ಬರೆದು, ಅಹವಾಲು ಸಲ್ಲಿಸಿತ್ತು ಎಂದು ಹೇಳಿದರು.