ಬಲಿಯಾ (ಉತ್ತರ ಪ್ರದೇಶ) (ಪಿಟಿಐ): ಸಮಾಜವಾದಿ ಪಕ್ಷದ ಸರ್ಕಾರ ಇದ್ದಾಗ ಓಲೈಕೆ ರಾಜಕಾರಣ ಮಾಡಲಾಗುತ್ತಿತ್ತು ಎಂದು
ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ. ಆಗ, ಮೊಹರಂ ದಿನ ವಿದ್ಯುತ್ ಪೂರೈಕೆ ಇರುತ್ತಿತ್ತು. ಆದರೆ, ರಾಮನವಮಿ ಮತ್ತು ಶ್ರೀ ಕೃಷ್ಣ ಜನ್ಮೋತ್ಸವದ ದಿನ ವಿದ್ಯುತ್ ಪೂರೈಕೆ ಇರುತ್ತಿರಲಿಲ್ಲ ಎಂದು ಶಾ ಆರೋಪಿಸಿದ್ದಾರೆ.