<p><strong>ಅಮರಾವತಿ</strong>: ವಾಟ್ಸ್ಆ್ಯಪ್ ಮೂಲಕ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಸೇವೆಯನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ವಿಜಯಾನಂದ ತಿಳಿಸಿದ್ದಾರೆ.</p><p>ವಾಟ್ಸ್ಆ್ಯಪ್ ಮೂಲಕ ಆಡಳಿತ ಸೇವೆಗಳು ಎಂಬ ಹೊಸ ನೀತಿಯ ಅನುಸಾರ ಇದನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.</p><p>ಈ ತಿಂಗಳಾಂತ್ಯಕ್ಕೆ ತೆನಾಲಿ ಜಿಲ್ಲೆಯಲ್ಲಿ ವಾಟ್ಸ್ಆ್ಯಪ್ ಮೂಲಕ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಸೇವೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.</p><p>ವಿಜಯಾನಂದ ಅವರು ಸೋಮವಾರ ರಿಯಲ್ ಟೈಮ್ ಗವರ್ನೆನ್ಸ್ ಸೊಸೈಟಿ (ಆರ್ಟಿಜಿಎಸ್) ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಆಡಳಿತ ಸೇವೆಗಳು ಜನ ಸ್ನೇಹಿಯಾಗಿರಬೇಕು. ಡಿಜಿಟಲ್ ತಂತ್ರಜ್ಞಾನದಿಂದ ‘ರಿಯಲ್ ಟೈಮ್’ನಲ್ಲಿ ಸಾಧ್ಯವಿರುವಷ್ಟು ಸೇವೆಗಳು ಜನರಿಗೆ ದೊರಕಬೇಕು ಎಂಬ ಕೆಲಸಗಳನ್ನು ಈ ರಿಯಲ್ ಟೈಮ್ ಗವರ್ನೆನ್ಸ್ ಸೊಸಾಯಿಟಿ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.</p><p>ಹಂತ ಹಂತವಾಗಿ ಪಂಚಾಯತ್ ರಾಜ್, ಆರೋಗ್ಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಸೇವೆಗಳು ವಾಟ್ಸ್ಆ್ಯಪ್ ಮೂಲಕ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗುವುದು ಎಂದು ವಿವರಿಸಿದ್ದಾರೆ.</p><p>ಸಿಎಂ ಚಂದ್ರಬಾಬು ನಾಯ್ಡು ಅವರ ಒತ್ತಾಸೆಯಿಂದ ಆರ್ಟಿಜಿಎಸ್ ತ್ವರಿತವಾಗಿ ಕೆಲಸ ಮಾಡುತ್ತಿದೆ ಎಂದು ಕೆ. ವಿಜಯಾನಂದ ಹೇಳಿದ್ದಾರೆ.</p>.ಟೂಲ್ಕಿಟ್ ಬಹಳ ಸೊಗಸಾಗಿದೆ.. ಬಿಜೆಪಿಯ ವಾಟ್ಸ್ಆ್ಯಪ್ ಚಾಟ್ ಹಂಚಿಕೊಂಡ ಖರ್ಗೆ.ಹುಬ್ಬಳ್ಳಿ | ವಾಟ್ಸ್ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ</strong>: ವಾಟ್ಸ್ಆ್ಯಪ್ ಮೂಲಕ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಸೇವೆಯನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ವಿಜಯಾನಂದ ತಿಳಿಸಿದ್ದಾರೆ.</p><p>ವಾಟ್ಸ್ಆ್ಯಪ್ ಮೂಲಕ ಆಡಳಿತ ಸೇವೆಗಳು ಎಂಬ ಹೊಸ ನೀತಿಯ ಅನುಸಾರ ಇದನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.</p><p>ಈ ತಿಂಗಳಾಂತ್ಯಕ್ಕೆ ತೆನಾಲಿ ಜಿಲ್ಲೆಯಲ್ಲಿ ವಾಟ್ಸ್ಆ್ಯಪ್ ಮೂಲಕ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಸೇವೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.</p><p>ವಿಜಯಾನಂದ ಅವರು ಸೋಮವಾರ ರಿಯಲ್ ಟೈಮ್ ಗವರ್ನೆನ್ಸ್ ಸೊಸೈಟಿ (ಆರ್ಟಿಜಿಎಸ್) ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಆಡಳಿತ ಸೇವೆಗಳು ಜನ ಸ್ನೇಹಿಯಾಗಿರಬೇಕು. ಡಿಜಿಟಲ್ ತಂತ್ರಜ್ಞಾನದಿಂದ ‘ರಿಯಲ್ ಟೈಮ್’ನಲ್ಲಿ ಸಾಧ್ಯವಿರುವಷ್ಟು ಸೇವೆಗಳು ಜನರಿಗೆ ದೊರಕಬೇಕು ಎಂಬ ಕೆಲಸಗಳನ್ನು ಈ ರಿಯಲ್ ಟೈಮ್ ಗವರ್ನೆನ್ಸ್ ಸೊಸಾಯಿಟಿ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.</p><p>ಹಂತ ಹಂತವಾಗಿ ಪಂಚಾಯತ್ ರಾಜ್, ಆರೋಗ್ಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಸೇವೆಗಳು ವಾಟ್ಸ್ಆ್ಯಪ್ ಮೂಲಕ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗುವುದು ಎಂದು ವಿವರಿಸಿದ್ದಾರೆ.</p><p>ಸಿಎಂ ಚಂದ್ರಬಾಬು ನಾಯ್ಡು ಅವರ ಒತ್ತಾಸೆಯಿಂದ ಆರ್ಟಿಜಿಎಸ್ ತ್ವರಿತವಾಗಿ ಕೆಲಸ ಮಾಡುತ್ತಿದೆ ಎಂದು ಕೆ. ವಿಜಯಾನಂದ ಹೇಳಿದ್ದಾರೆ.</p>.ಟೂಲ್ಕಿಟ್ ಬಹಳ ಸೊಗಸಾಗಿದೆ.. ಬಿಜೆಪಿಯ ವಾಟ್ಸ್ಆ್ಯಪ್ ಚಾಟ್ ಹಂಚಿಕೊಂಡ ಖರ್ಗೆ.ಹುಬ್ಬಳ್ಳಿ | ವಾಟ್ಸ್ಆ್ಯಪ್ ಗ್ರೂಪ್ ಹ್ಯಾಕ್; ‘ಎಪಿಕೆ’ ಕರಾಮತ್ತು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>