<p><strong>ಹೈದರಾಬಾದ್</strong>: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ಭವ್ಯವಾದ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು 94 ವರ್ಷದ ಹರಿಮುಕುಂದ ಪಾಂಡಾ ನಿರ್ಮಿಸಿದ್ದಾರೆ. ಶನಿವಾರ ಇಲ್ಲಿ ನಡೆದ ಕಾಲ್ತುಳಿತದಲ್ಲಿ 10 ಜನರು ಮೃತಪಟ್ಟಿದ್ದಾರೆ.</p>.<p>ಪ್ರತಿಯೊಬ್ಬರಿಗೂ ವೆಂಕಟೇಶ್ವರ ದೇವರ ದರ್ಶನ ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ಪಾಂಡಾ ನಿರ್ಮಿಸಿರುವ ಈ ದೇವಸ್ಥಾನ, ಈಗ ಕಾಲ್ತುಳಿತ ಘಟನೆಯಿಂದಾಗಿ ಅವರ ಆಶಯವನ್ನೇ ಬುಡಮೇಲು ಮಾಡಿದಂತಾಗಿದೆ.</p>.<p>ಈ ದೇವಸ್ಥಾನ ನಿರ್ಮಿಸಲು ಕಾರಣವಾದ ಸಂಗತಿಯೂ ಆಸಕ್ತಿದಾಯಕ. ದಶಕದ ಹಿಂದೆ ತಿರುಪತಿಗೆ ಹೋಗಿದ್ದ ಹರಿಮುಕುಂದ ಪಾಂಡಾ ಅವರಿಗೆ ವೆಂಕಟೇಶ್ವರ ದೇವರ ದರ್ಶನ ಸಮರ್ಪಕವಾಗಿ ಸಿಗಲಿಲ್ಲ. ಈ ಕಹಿ ಅನುಭವ ಅವರನ್ನು ಬಹುವಾಗಿ ಕಾಡಿತು.</p>.<p>ಎಲ್ಲರಿಗೂ ವೆಂಕಟೇಶ್ವರ ದೇವರ ದರ್ಶನ ಸುಲಭವಾಗಿ ಸಿಗಬೇಕು. ತಿರುಪತಿಯಲ್ಲಿರುವ ದೇವಸ್ಥಾನವನ್ನೇ ಹೋಲುವಂತಹ ದೇಗುಲವನ್ನು ನಿರ್ಮಿಸಬೇಕು ಎಂದು ನಿಶ್ಚಯಿಸಿದ ಅವರು, ಅದರನ್ನೂ ಕಾರ್ಯಗತಗೊಳಿಸಿದರು.</p>.<p>ತಮ್ಮ ಒಡೆತನದ 50 ಎಕರೆ ಎಸ್ಟೇಟ್ ಪೈಕಿ, 10 ಎಕರೆ 40 ಸೆಂಟ್ ಜಾಗದಲ್ಲಿ ಈ ಭವ್ಯ ದೇವಸ್ಥಾನ ನಿರ್ಮಿಸಿದ್ದಾರೆ. ಅಂದಾಜು ₹2 ಕೋಟಿ ವೆಚ್ಚ ಮಾಡಿ, 6 ವರ್ಷಗಳಲ್ಲಿ ಇದನ್ನು ನಿರ್ಮಿಸಲಾಗಿದೆ.</p>.<p>ಕೆಲ ಕಾಮಗಾರಿಗಳು ಬಾಕಿ ಇರುವಾಗಲೇ, ನಾಲ್ಕು ತಿಂಗಳ ಹಿಂದೆ ಅವರು ಈ ದೇವಸ್ಥಾನವನ್ನು ಉದ್ಘಾಟಿಸಿದ್ದರು. ಮೂಲ ಮೂರ್ತಿಯ ಎತ್ತರ 9 ಅಡಿ 9 ಇಂಚು ಇದ್ದು, ಪ್ರತ್ಯೇಕವಾಗಿ ಶ್ರೀದೇವಿ ಮತ್ತು ಭೂದೇವಿಯರ ಗರ್ಭಗುಡಿಗಳನ್ನು ಸಹ ನಿರ್ಮಿಸಲಾಗಿದೆ. ಇವೆಲ್ಲವೂ ತಿರುಪತಿಯಲ್ಲಿನ ದೇವತಾಮೂರ್ತಿಗಳ ಪ್ರತಿರೂಪವಾಗಿವೆ.</p>.<p>‘ನಾನು ಚಿಕ್ಕಂದಿನಿಂದಲೂ ತಿರುಪತಿಗೆ ಹೋಗುತ್ತಿದ್ದೆ. ದೇವರ ಮೂರ್ತಿ ಮುಂದೆ ಹೆಚ್ಚುಹೊತ್ತು ನಿಂತು ದರ್ಶನ ಪಡೆಯುತ್ತಿದ್ದೆ. ಇದಕ್ಕೆ ಕೆಲ ಅರ್ಚಕರು ಕೂಡ ನನಗೆ ನೆರವಾಗುತ್ತಿದ್ದರು’ ಎಂದು ಪಾಂಡಾ ಹೇಳಿದ್ದಾರೆ.</p>.<p>‘ಈಗ ಅದೆಲ್ಲಾ ಗತವೈಭವ. ಹತ್ತು ವರ್ಷಗಳ ಹಿಂದೆ ಹೋದಾಗ ನನಗೆ ಕಹಿ ಅನುಭವವಾಯಿತು. ದೇವರ ದರ್ಶನ ಪಡೆಯಲು ಮುಂದಾದ ವೇಳೆ ನನ್ನನ್ನು ನೂಕಿದರು. ಸರಿಯಾದ ದರ್ಶನ ಸಿಗಲಿಲ್ಲ’ ಎಂದಿದ್ದಾರೆ.</p>.<p>‘ನನಗಾದ ಈ ಕಹಿ ಅನುಭವ ಕುರಿತು ತಾಯಿ ಬಳಿ ಹೇಳಿಕೊಂಡೆ. ಆಗ, ನೀವೇ ಏಕೆ ನಮ್ಮ ಗ್ರಾಮದಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಿಸಬಾರದು. ನೀನು ದರ್ಶನ ಪಡೆಯುವ ಜೊತೆಗೆ ಇತರರಿಗೂ ಈ ಸೌಲಭ್ಯ ಕಲ್ಪಿಸಬಹುದಲ್ಲ ಎಂಬ ಸಲಹೆ ಇತ್ತಳು. ತಾಯಿಯ ಸಲಹೆಯಂತೆ ಈ ದೇವಸ್ಥಾನ ನಿರ್ಮಿಸಿದೆ’ ಎಂದೂ ಹೇಳಿದ್ದಾರೆ.</p>.<p>‘ದೇವಸ್ಥಾನಕ್ಕೆ ಅಂದಾಜು 2 ಸಾವಿರದಷ್ಟು ಜನಕ್ಕೆ ಬರಬಹುದು ಎಂದು ಭಾವಿಸಿದ್ದೆವು. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂಬ ನಿರೀಕ್ಷೆ ಇರದ ಕಾರಣ ಪೊಲೀಸರಿಗೆ ತಿಳಿಸಿರಲಿಲ್ಲ’ ಎಂದು ಬೇಸರದಿಂದ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗಾದಲ್ಲಿರುವ ಭವ್ಯವಾದ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು 94 ವರ್ಷದ ಹರಿಮುಕುಂದ ಪಾಂಡಾ ನಿರ್ಮಿಸಿದ್ದಾರೆ. ಶನಿವಾರ ಇಲ್ಲಿ ನಡೆದ ಕಾಲ್ತುಳಿತದಲ್ಲಿ 10 ಜನರು ಮೃತಪಟ್ಟಿದ್ದಾರೆ.</p>.<p>ಪ್ರತಿಯೊಬ್ಬರಿಗೂ ವೆಂಕಟೇಶ್ವರ ದೇವರ ದರ್ಶನ ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ಪಾಂಡಾ ನಿರ್ಮಿಸಿರುವ ಈ ದೇವಸ್ಥಾನ, ಈಗ ಕಾಲ್ತುಳಿತ ಘಟನೆಯಿಂದಾಗಿ ಅವರ ಆಶಯವನ್ನೇ ಬುಡಮೇಲು ಮಾಡಿದಂತಾಗಿದೆ.</p>.<p>ಈ ದೇವಸ್ಥಾನ ನಿರ್ಮಿಸಲು ಕಾರಣವಾದ ಸಂಗತಿಯೂ ಆಸಕ್ತಿದಾಯಕ. ದಶಕದ ಹಿಂದೆ ತಿರುಪತಿಗೆ ಹೋಗಿದ್ದ ಹರಿಮುಕುಂದ ಪಾಂಡಾ ಅವರಿಗೆ ವೆಂಕಟೇಶ್ವರ ದೇವರ ದರ್ಶನ ಸಮರ್ಪಕವಾಗಿ ಸಿಗಲಿಲ್ಲ. ಈ ಕಹಿ ಅನುಭವ ಅವರನ್ನು ಬಹುವಾಗಿ ಕಾಡಿತು.</p>.<p>ಎಲ್ಲರಿಗೂ ವೆಂಕಟೇಶ್ವರ ದೇವರ ದರ್ಶನ ಸುಲಭವಾಗಿ ಸಿಗಬೇಕು. ತಿರುಪತಿಯಲ್ಲಿರುವ ದೇವಸ್ಥಾನವನ್ನೇ ಹೋಲುವಂತಹ ದೇಗುಲವನ್ನು ನಿರ್ಮಿಸಬೇಕು ಎಂದು ನಿಶ್ಚಯಿಸಿದ ಅವರು, ಅದರನ್ನೂ ಕಾರ್ಯಗತಗೊಳಿಸಿದರು.</p>.<p>ತಮ್ಮ ಒಡೆತನದ 50 ಎಕರೆ ಎಸ್ಟೇಟ್ ಪೈಕಿ, 10 ಎಕರೆ 40 ಸೆಂಟ್ ಜಾಗದಲ್ಲಿ ಈ ಭವ್ಯ ದೇವಸ್ಥಾನ ನಿರ್ಮಿಸಿದ್ದಾರೆ. ಅಂದಾಜು ₹2 ಕೋಟಿ ವೆಚ್ಚ ಮಾಡಿ, 6 ವರ್ಷಗಳಲ್ಲಿ ಇದನ್ನು ನಿರ್ಮಿಸಲಾಗಿದೆ.</p>.<p>ಕೆಲ ಕಾಮಗಾರಿಗಳು ಬಾಕಿ ಇರುವಾಗಲೇ, ನಾಲ್ಕು ತಿಂಗಳ ಹಿಂದೆ ಅವರು ಈ ದೇವಸ್ಥಾನವನ್ನು ಉದ್ಘಾಟಿಸಿದ್ದರು. ಮೂಲ ಮೂರ್ತಿಯ ಎತ್ತರ 9 ಅಡಿ 9 ಇಂಚು ಇದ್ದು, ಪ್ರತ್ಯೇಕವಾಗಿ ಶ್ರೀದೇವಿ ಮತ್ತು ಭೂದೇವಿಯರ ಗರ್ಭಗುಡಿಗಳನ್ನು ಸಹ ನಿರ್ಮಿಸಲಾಗಿದೆ. ಇವೆಲ್ಲವೂ ತಿರುಪತಿಯಲ್ಲಿನ ದೇವತಾಮೂರ್ತಿಗಳ ಪ್ರತಿರೂಪವಾಗಿವೆ.</p>.<p>‘ನಾನು ಚಿಕ್ಕಂದಿನಿಂದಲೂ ತಿರುಪತಿಗೆ ಹೋಗುತ್ತಿದ್ದೆ. ದೇವರ ಮೂರ್ತಿ ಮುಂದೆ ಹೆಚ್ಚುಹೊತ್ತು ನಿಂತು ದರ್ಶನ ಪಡೆಯುತ್ತಿದ್ದೆ. ಇದಕ್ಕೆ ಕೆಲ ಅರ್ಚಕರು ಕೂಡ ನನಗೆ ನೆರವಾಗುತ್ತಿದ್ದರು’ ಎಂದು ಪಾಂಡಾ ಹೇಳಿದ್ದಾರೆ.</p>.<p>‘ಈಗ ಅದೆಲ್ಲಾ ಗತವೈಭವ. ಹತ್ತು ವರ್ಷಗಳ ಹಿಂದೆ ಹೋದಾಗ ನನಗೆ ಕಹಿ ಅನುಭವವಾಯಿತು. ದೇವರ ದರ್ಶನ ಪಡೆಯಲು ಮುಂದಾದ ವೇಳೆ ನನ್ನನ್ನು ನೂಕಿದರು. ಸರಿಯಾದ ದರ್ಶನ ಸಿಗಲಿಲ್ಲ’ ಎಂದಿದ್ದಾರೆ.</p>.<p>‘ನನಗಾದ ಈ ಕಹಿ ಅನುಭವ ಕುರಿತು ತಾಯಿ ಬಳಿ ಹೇಳಿಕೊಂಡೆ. ಆಗ, ನೀವೇ ಏಕೆ ನಮ್ಮ ಗ್ರಾಮದಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಿಸಬಾರದು. ನೀನು ದರ್ಶನ ಪಡೆಯುವ ಜೊತೆಗೆ ಇತರರಿಗೂ ಈ ಸೌಲಭ್ಯ ಕಲ್ಪಿಸಬಹುದಲ್ಲ ಎಂಬ ಸಲಹೆ ಇತ್ತಳು. ತಾಯಿಯ ಸಲಹೆಯಂತೆ ಈ ದೇವಸ್ಥಾನ ನಿರ್ಮಿಸಿದೆ’ ಎಂದೂ ಹೇಳಿದ್ದಾರೆ.</p>.<p>‘ದೇವಸ್ಥಾನಕ್ಕೆ ಅಂದಾಜು 2 ಸಾವಿರದಷ್ಟು ಜನಕ್ಕೆ ಬರಬಹುದು ಎಂದು ಭಾವಿಸಿದ್ದೆವು. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂಬ ನಿರೀಕ್ಷೆ ಇರದ ಕಾರಣ ಪೊಲೀಸರಿಗೆ ತಿಳಿಸಿರಲಿಲ್ಲ’ ಎಂದು ಬೇಸರದಿಂದ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>