<p class="title"><strong>ನವದೆಹಲಿ </strong>(ಪಿಟಿಐ): ಪಾಕಿಸ್ತಾನದ ಗೂಢಚಾರ ಸಂಸ್ಥೆ ‘ಐಎಸ್‘ಗೆ ಸೇನೆಯ ವರ್ಗೀಕೃತ ದಾಖಲೆಗಳನ್ನು ಪೂರೈಸುತ್ತಿದ್ದ ಆರೋಪದಡಿ ಸೇನೆಯ ಸಿಬ್ಬಂದಿಯೊಬ್ಬರು ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.</p>.<p class="title">‘ಸೂಕ್ಷ್ಮ, ಪ್ರಮುಖ ದಾಖಲೆಗಳನ್ನು ಪೋಖ್ರಾನ್ನ ಸೇನಾ ನೆಲೆಯ ಬಳಿ, 34 ವರ್ಷದ ತರಕಾರಿ ವ್ಯಾಪಾರಿಯೊಬ್ಬ ಐಎಸ್ಗೆ ಒಪ್ಪಿಸುವಾಗ ಸಿಕ್ಕಿಬಿದ್ದಿದ್ದರಿಂದಾಗಿ ಈ ಪ್ರಕರಣ ಗೊತ್ತಾಗಿತ್ತು. ಪತ್ತೆಯಾದ ದಾಖಲೆಗಳು ಸೇನೆಯ ಪ್ರಮುಖ, ವರ್ಗೀಕರಿಸಿದ ದಾಖಲೆಗಳಾಗಿವೆ’ ಎಂದು ಸೇನೆಯ ಮುಖ್ಯ ಕಚೇರಿಯೂ ದೃಢಪಡಿಸಿದೆ.</p>.<p>ರಾಜಸ್ಥಾನದ ಪೋಖ್ರಾನ್ನಲ್ಲಿ ತರಕಾರಿ ಪೂರೈಕೆದಾರ ಹಬೀಬ್ ಖಾನ್ ಎಂಬವನನ್ನು ಬಂಧಿಸಲಾಗಿದೆ. ಮುಖ್ಯ ದಾಖಲೆಗಳನ್ನು ನೆರೆಯ ದೇಶಕ್ಕೆ ಪೂರೈಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬಂಧಿಸಿದ್ದು, ಈ ಬಗ್ಗೆ ಮೊಕದ್ದಮೆ ದಾಖಲಿಸಲಾಗಿದೆ’ ಎಂದು ವಿಶೇಷ ಕಮಿಷನರ್ (ಅಪರಾಧ) ಪ್ರವೀರ್ ರಂಜನ್ ಅವರು ತಿಳಿಸಿದರು.</p>.<p>‘ಇದರಲ್ಲಿ ಸೇನೆಯ ಪರಂಜಿತ್ ಅವರ ಪಾತ್ರವಿರುವುದೂ ತನಿಖೆಯಲ್ಲಿ ಗೊತ್ತಾಗಿದೆ. ಪರಂಜಿತ್ ಪೋಖ್ರಾನ್ನಲ್ಲಿ ಕೆಲಸ ಮಾಡುವಾಗ ಇವರ ಸಂಪರ್ಕಕ್ಕೆ ಬಂದಿದ್ದ ರೆಹಮಾನ್ ದಾಖಲೆಗಳನ್ನು ಒದಗಿಸಲು ಕೋರಿದ್ದರು. ಪರಂಜಿತ್ ಸದ್ಯ ಆಗ್ರಾ ಕಂಟೋನ್ಮೆಂಟ್ನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ </strong>(ಪಿಟಿಐ): ಪಾಕಿಸ್ತಾನದ ಗೂಢಚಾರ ಸಂಸ್ಥೆ ‘ಐಎಸ್‘ಗೆ ಸೇನೆಯ ವರ್ಗೀಕೃತ ದಾಖಲೆಗಳನ್ನು ಪೂರೈಸುತ್ತಿದ್ದ ಆರೋಪದಡಿ ಸೇನೆಯ ಸಿಬ್ಬಂದಿಯೊಬ್ಬರು ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.</p>.<p class="title">‘ಸೂಕ್ಷ್ಮ, ಪ್ರಮುಖ ದಾಖಲೆಗಳನ್ನು ಪೋಖ್ರಾನ್ನ ಸೇನಾ ನೆಲೆಯ ಬಳಿ, 34 ವರ್ಷದ ತರಕಾರಿ ವ್ಯಾಪಾರಿಯೊಬ್ಬ ಐಎಸ್ಗೆ ಒಪ್ಪಿಸುವಾಗ ಸಿಕ್ಕಿಬಿದ್ದಿದ್ದರಿಂದಾಗಿ ಈ ಪ್ರಕರಣ ಗೊತ್ತಾಗಿತ್ತು. ಪತ್ತೆಯಾದ ದಾಖಲೆಗಳು ಸೇನೆಯ ಪ್ರಮುಖ, ವರ್ಗೀಕರಿಸಿದ ದಾಖಲೆಗಳಾಗಿವೆ’ ಎಂದು ಸೇನೆಯ ಮುಖ್ಯ ಕಚೇರಿಯೂ ದೃಢಪಡಿಸಿದೆ.</p>.<p>ರಾಜಸ್ಥಾನದ ಪೋಖ್ರಾನ್ನಲ್ಲಿ ತರಕಾರಿ ಪೂರೈಕೆದಾರ ಹಬೀಬ್ ಖಾನ್ ಎಂಬವನನ್ನು ಬಂಧಿಸಲಾಗಿದೆ. ಮುಖ್ಯ ದಾಖಲೆಗಳನ್ನು ನೆರೆಯ ದೇಶಕ್ಕೆ ಪೂರೈಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬಂಧಿಸಿದ್ದು, ಈ ಬಗ್ಗೆ ಮೊಕದ್ದಮೆ ದಾಖಲಿಸಲಾಗಿದೆ’ ಎಂದು ವಿಶೇಷ ಕಮಿಷನರ್ (ಅಪರಾಧ) ಪ್ರವೀರ್ ರಂಜನ್ ಅವರು ತಿಳಿಸಿದರು.</p>.<p>‘ಇದರಲ್ಲಿ ಸೇನೆಯ ಪರಂಜಿತ್ ಅವರ ಪಾತ್ರವಿರುವುದೂ ತನಿಖೆಯಲ್ಲಿ ಗೊತ್ತಾಗಿದೆ. ಪರಂಜಿತ್ ಪೋಖ್ರಾನ್ನಲ್ಲಿ ಕೆಲಸ ಮಾಡುವಾಗ ಇವರ ಸಂಪರ್ಕಕ್ಕೆ ಬಂದಿದ್ದ ರೆಹಮಾನ್ ದಾಖಲೆಗಳನ್ನು ಒದಗಿಸಲು ಕೋರಿದ್ದರು. ಪರಂಜಿತ್ ಸದ್ಯ ಆಗ್ರಾ ಕಂಟೋನ್ಮೆಂಟ್ನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>