ಎಂಡಿಎಂ ಗುಟ್ಕಾ ಕಂಪನಿ ಮಾಲೀಕರಾದ ಎ.ವಿ. ಮಾಧವರಾವ್, ಉಮಾಶಂಕರ ಗುಪ್ತಾ ಮತ್ತು ಶ್ರೀನಿವಾಸರಾವ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿ ಪಿ. ಸೆಂತಿಲ್ ಮುರುಗನ್ ಮತ್ತು ಕೇಂದ್ರ ಅಬಕಾರಿ ಇಲಾಖೆ ಅಧೀಕ್ಷಕ ಎನ್.ಕೆ. ಪಾಂಡಿಯನ್ ಬಂಧಿತರು. ಈ ಪ್ರಕರಣದಲ್ಲಿ ಮೊದಲ ಬಂಧನ ಇದಾಗಿದ್ದು, ಎಲ್ಲರನ್ನು ಸಿಬಿಐ ನ್ಯಾಯಾಲಯ ಇದೇ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.