<p><strong>ರಾಮೇಶ್ವರ:</strong> ಶ್ರೀ ಶ್ರೀ ರವಿಶಂಕರ್ ಅವರ ಸಾನ್ನಿಧ್ಯದಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಹಾರುದ್ರ ಪೂಜೆಯೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗಳಿಗೆ ಚಾಲನೆ ದೊರೆಯಿತು.</p>.<p>ಸಮಾರಂಭದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು. ದೇಶದ 12 ಜ್ಯೋತಿರ್ಲಿಂಗ ಕ್ಷೇತ್ರಗಳು, ಅಮರನಾಥ ಮತ್ತು ಪಶುಪತಿನಾಥ ಮಂದಿರಗಳಿಂದ ಆಗಮಿಸಿದ ಪಂಡಿತರು ಈ ಮಹಾ ವಿಧಿಗೆ ಆಶೀರ್ವಾದ ನೀಡಿದರು. </p>.<p>ಪ್ರತಿಯೊಂದು ಕ್ಷೇತ್ರದಿಂದ ತರಿಸಲಾದ ಪವಿತ್ರ ತೀರ್ಥಗಳನ್ನು ಪೂಜೆಯಲ್ಲಿ ಅರ್ಪಿಸಲಾಯಿತು. ತಮಿಳುನಾಡಿನ ಪಂಚಭೂತ ಕ್ಷೇತ್ರಗಳಿಂದ—ಭೂಮಿ, ಜಲ, ಅಗ್ನಿ, ವಾಯು, ಆಕಾಶ ಎಂಬ ಪ್ರಕೃತಿಯ ಐದು ಮೂಲತತ್ತ್ವಗಳನ್ನು ಪ್ರತಿನಿಧಿಸುವ ಪವಿತ್ರ ಜಲಗಳನ್ನೂ ವಿಶೇಷ ರುದ್ರಾಭಿಷೇಕದಲ್ಲಿ ಅರ್ಪಿಸಲಾಯಿತು. </p> <p>ಗುರುದೇವರು ಇಲ್ಲಿ ಸೃಷ್ಟಿಸಿದ ಆತ್ಮಿಕ ಮಹಿಮೆ ಅಸಾಧಾರಣ. ಎಲ್ಲ 12 ಜ್ಯೋತಿರ್ಲಿಂಗಗಳು ಒಂದೇ ಸ್ಥಳದಲ್ಲಿ ಸಾನ್ನಿಧ್ಯ ಪಡೆದಿರುವ ಅನುಭವವಾಗುತ್ತಿದೆ ಎಂದು ಕಾಶಿ ವಿಶ್ವನಾಥ ಕ್ಷೇತ್ರದ ಪಂಡಿತ ರಾಮಾನಂದ ದುಬೆ ಹೇಳಿದರು. </p> <p>ಏಳನೇ ಶತಮಾನದ ಶೈವ ನಾಯನಾರ್ ಸಂತ ತಿರುಜ್ಞಾನಸಂಬಂದರ್ ರಚಿಸಿದ ಪ್ರಸಿದ್ಧ ‘ಕೋಳರು ಪಥಿಗಂ’ನ್ನು ಜಗತ್ತಿನ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಸುಮಾರು ಎರಡು ಕೋಟಿ ಭಕ್ತರು ಒಂದೇ ಸಮಯದಲ್ಲಿ ಸಮೂಹವಾಗಿ ಪಠಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮೇಶ್ವರ:</strong> ಶ್ರೀ ಶ್ರೀ ರವಿಶಂಕರ್ ಅವರ ಸಾನ್ನಿಧ್ಯದಲ್ಲಿ ಸೋಮನಾಥ ಜ್ಯೋತಿರ್ಲಿಂಗ ಮಹಾರುದ್ರ ಪೂಜೆಯೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಗಳಿಗೆ ಚಾಲನೆ ದೊರೆಯಿತು.</p>.<p>ಸಮಾರಂಭದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು. ದೇಶದ 12 ಜ್ಯೋತಿರ್ಲಿಂಗ ಕ್ಷೇತ್ರಗಳು, ಅಮರನಾಥ ಮತ್ತು ಪಶುಪತಿನಾಥ ಮಂದಿರಗಳಿಂದ ಆಗಮಿಸಿದ ಪಂಡಿತರು ಈ ಮಹಾ ವಿಧಿಗೆ ಆಶೀರ್ವಾದ ನೀಡಿದರು. </p>.<p>ಪ್ರತಿಯೊಂದು ಕ್ಷೇತ್ರದಿಂದ ತರಿಸಲಾದ ಪವಿತ್ರ ತೀರ್ಥಗಳನ್ನು ಪೂಜೆಯಲ್ಲಿ ಅರ್ಪಿಸಲಾಯಿತು. ತಮಿಳುನಾಡಿನ ಪಂಚಭೂತ ಕ್ಷೇತ್ರಗಳಿಂದ—ಭೂಮಿ, ಜಲ, ಅಗ್ನಿ, ವಾಯು, ಆಕಾಶ ಎಂಬ ಪ್ರಕೃತಿಯ ಐದು ಮೂಲತತ್ತ್ವಗಳನ್ನು ಪ್ರತಿನಿಧಿಸುವ ಪವಿತ್ರ ಜಲಗಳನ್ನೂ ವಿಶೇಷ ರುದ್ರಾಭಿಷೇಕದಲ್ಲಿ ಅರ್ಪಿಸಲಾಯಿತು. </p> <p>ಗುರುದೇವರು ಇಲ್ಲಿ ಸೃಷ್ಟಿಸಿದ ಆತ್ಮಿಕ ಮಹಿಮೆ ಅಸಾಧಾರಣ. ಎಲ್ಲ 12 ಜ್ಯೋತಿರ್ಲಿಂಗಗಳು ಒಂದೇ ಸ್ಥಳದಲ್ಲಿ ಸಾನ್ನಿಧ್ಯ ಪಡೆದಿರುವ ಅನುಭವವಾಗುತ್ತಿದೆ ಎಂದು ಕಾಶಿ ವಿಶ್ವನಾಥ ಕ್ಷೇತ್ರದ ಪಂಡಿತ ರಾಮಾನಂದ ದುಬೆ ಹೇಳಿದರು. </p> <p>ಏಳನೇ ಶತಮಾನದ ಶೈವ ನಾಯನಾರ್ ಸಂತ ತಿರುಜ್ಞಾನಸಂಬಂದರ್ ರಚಿಸಿದ ಪ್ರಸಿದ್ಧ ‘ಕೋಳರು ಪಥಿಗಂ’ನ್ನು ಜಗತ್ತಿನ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಸುಮಾರು ಎರಡು ಕೋಟಿ ಭಕ್ತರು ಒಂದೇ ಸಮಯದಲ್ಲಿ ಸಮೂಹವಾಗಿ ಪಠಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>