ಕೈದಿ ಹಾಗೂ ಸಂದರ್ಶಕರ ನಡುವೆ ಕಬ್ಬಿಣದ ಮೆಶ್ ಇರುವ ’ಮುಲಾಖಾತ್ ಜಂಗ್ಲಾ’ ವ್ಯವಸ್ಥೆಯಡಿ ಭೇಟಿ ನಡೆಯಿತು. ಈವರೆಗೂ ಕುಟುಂಬ ಸದಸ್ಯರು ವಿಡಿಯೊ ಕಾನ್ಫರೆನ್ಸ್ ಮೂಲಕ ಕೇಜ್ರಿವಾಲ್ ಅವರನ್ನು ಮಾತನಾಡಿಸುತ್ತಿದ್ದರು.
ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಇ.ಡಿಯಿಂದ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್, ತಮ್ಮನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ಇಂದು ಕೋರ್ಟ್ ತಿರಸ್ಕರಿಸಿತ್ತು.
ಜೈಲು ಸಂಖ್ಯೆ ಎರಡಲ್ಲಿ ಕೇಜ್ರಿವಾಲ್ ಅವರನ್ನು ಇಡಲಾಗಿದೆ.