‘ನಿಜವಾದ ದಾಳಿ ನಡೆದ ಮೂರು ದಿನಗಳಿಗೆ ಮುಂಚೆಯೇ ವಾಯುದಾಳಿಯ ಮಾಹಿತಿಯು ಒಬ್ಬ ಪತ್ರಕರ್ತನಿಗೆ (ಮತ್ತು ಅವರ ಗೆಳೆಯ) ತಿಳಿದಿತ್ತೇ? ಹೌದು ಎಂದಾದರೆ, ಅವರ ‘ಮೂಲ’ವು ಈ ಮಾಹಿತಿಯನ್ನು ಪಾಕಿಸ್ತಾನದ ಗೂಢಚರರು ಅಥವಾ ಮಾಹಿತಿದಾರರು ಸೇರಿದಂತೆ ಬೇರೆಯವರೊಂದಿಗೆ ಹಂಚಿಕೊಂಡಿಲ್ಲ ಎಂಬುದಕ್ಕೆ ಏನು ಖಾತರಿ ಇದೆ’ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ. ರಹಸ್ಯವಾದ ನಿರ್ಧಾರವು ಸರ್ಕಾರವು ಬೆಂಬಲಿಸುವ ಪತ್ರಕರ್ತನಿಗೆ ಸಿಕ್ಕಿದ್ದು ಹೇಗೆ ಎಂದೂ ಚಿದಂಬರಂ ಕೇಳಿದ್ದಾರೆ.