'ಕೇಂದ್ರ ಸರ್ಕಾರ ಡಾ.ಎಸ್ ಸ್ವಾಮಿನಾಥನ್ ಅವರ ಹೆಸರನ್ನು ಭಾರತ ರತ್ನಕ್ಕೆ ಘೋಷಿಸಿದೆ. ಆದರೆ ಕೃಷಿ ಆದಾಯವನ್ನು ಹೆಚ್ಚಿಸುವ ಕುರಿತು ಅವರ ನೇತೃತ್ವದ ಆಯೋಗವು ಮಾಡಿದ ಶಿಫಾರಸನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ' ಎಂದು ಠಾಕ್ರೆ ದೂರಿದರು.
ಐವರು ಗಣ್ಯರಿಗೆ ‘ಭಾರತ ರತ್ನ'
ಕೇಂದ್ರ ಸರ್ಕಾರ ಈ ವರ್ಷ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನಕ್ಕೆ ಐವರ ಹೆಸರನ್ನು ಘೋಷಿಸಿದೆ. ಅವರಲ್ಲಿ ಮಾಜಿ ಪ್ರಧಾನಿಗಳಾದ ಪಿ.ವಿ ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಹಾಗೂ ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ.ಎಸ್ ಸ್ವಾಮಿನಾಥನ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಬಿಜೆಪಿ ಹಿರಿಯ ನಾಯಕ ಎಲ್. ಕೆ ಅಡ್ವಾಣಿ ಸೇರಿದ್ದಾರೆ.