<p><strong>ನವದೆಹಲಿ:</strong> ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. ಇಂಡಿಯಾ ಒಕ್ಕೂಟದ ಮಹಾಘಟಬಂಧನ್ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಗಳ ರಾಶಿ ಹರಿದಾಡಿದೆ.</p><p>ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಮೀಮ್ಗಳು ತುಂಬಿಕೊಂಡಿವೆ.</p><p>ಬಿಜೆಪಿಯ ಅಸ್ಸಾಂ ಘಟಕ, ‘ಧನ್ಯವಾದಗಳು ಬಿಹಾರ, 2026ರಲ್ಲಿ ಮತ್ತೊಮ್ಮೆ ಸಂಭ್ರಮಿಸೋಣ’ ಎಂದು ಬರೆದುಕೊಂಡಿದೆ. ಮತ್ತೊಂದು ಪೋಸ್ಟ್ನಲ್ಲಿ ‘ಮಕ್ಕಳ ದಿನದಂದು ‘ರಾಷ್ಟ್ರೀಯ ಮಗು’ವನ್ನು ಅಸಮಾಧಾನಗೊಳಿಸಿದ್ದಕ್ಕಾಗಿ ಕ್ಷಮೆಯಿರಲಿ’ ಎನ್ನುವ ಮೀಮ್ ಹಂಚಿಕೊಂಡಿದೆ.</p><p>ಪಶ್ಚಿಮ ಬಂಗಾಳ ಬಿಜೆಪಿ, ‘ಮುಂದೆ ಪಶ್ಚಿಮ ಬಂಗಾಳದಲ್ಲಿ’ ಎಂದು ಬರೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷ, ‘ಬಿಜೆಪಿ ಇನ್ನೂ ಬಂಗಾಳದಲ್ಲಿ ಜಯ ಸಾಧಿಸಲು ಕಾಯುತ್ತಿದೆ’ ಎಂದು ಬರೆದುಕೊಂಡು ಕುರ್ಚಿಯ ಚಿತ್ರವನ್ನು ಹಂಚಿಕೊಂಡಿದೆ.</p><p>ಇನ್ನೊಂದು ಪೋಸ್ಟ್ನಲ್ಲಿ ಬಿಜೆಪಿ, ‘ವಾತಾವರಣದಲ್ಲಿ ಕೆಲವೊಮ್ಮೆ ಬೆಳಕು, ಕೆಲವೊಮ್ಮೆ ನೆರಳು ಇರುತ್ತದೆ, ಆದರೆ ರಾಹುಲ್ ಗಾಂಧಿಯವರಿಗೂ ದೇಶವು ಅದೇ ವಾತಾವರಣವನ್ನು ಕಾಯ್ದುಕೊಂಡಿದೆ’ ಎಂದು ಬರೆದುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಅಭೂತಪೂರ್ವ ಗೆಲುವು ಸಾಧಿಸಿದೆ. ಇಂಡಿಯಾ ಒಕ್ಕೂಟದ ಮಹಾಘಟಬಂಧನ್ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಗಳ ರಾಶಿ ಹರಿದಾಡಿದೆ.</p><p>ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಮೀಮ್ಗಳು ತುಂಬಿಕೊಂಡಿವೆ.</p><p>ಬಿಜೆಪಿಯ ಅಸ್ಸಾಂ ಘಟಕ, ‘ಧನ್ಯವಾದಗಳು ಬಿಹಾರ, 2026ರಲ್ಲಿ ಮತ್ತೊಮ್ಮೆ ಸಂಭ್ರಮಿಸೋಣ’ ಎಂದು ಬರೆದುಕೊಂಡಿದೆ. ಮತ್ತೊಂದು ಪೋಸ್ಟ್ನಲ್ಲಿ ‘ಮಕ್ಕಳ ದಿನದಂದು ‘ರಾಷ್ಟ್ರೀಯ ಮಗು’ವನ್ನು ಅಸಮಾಧಾನಗೊಳಿಸಿದ್ದಕ್ಕಾಗಿ ಕ್ಷಮೆಯಿರಲಿ’ ಎನ್ನುವ ಮೀಮ್ ಹಂಚಿಕೊಂಡಿದೆ.</p><p>ಪಶ್ಚಿಮ ಬಂಗಾಳ ಬಿಜೆಪಿ, ‘ಮುಂದೆ ಪಶ್ಚಿಮ ಬಂಗಾಳದಲ್ಲಿ’ ಎಂದು ಬರೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷ, ‘ಬಿಜೆಪಿ ಇನ್ನೂ ಬಂಗಾಳದಲ್ಲಿ ಜಯ ಸಾಧಿಸಲು ಕಾಯುತ್ತಿದೆ’ ಎಂದು ಬರೆದುಕೊಂಡು ಕುರ್ಚಿಯ ಚಿತ್ರವನ್ನು ಹಂಚಿಕೊಂಡಿದೆ.</p><p>ಇನ್ನೊಂದು ಪೋಸ್ಟ್ನಲ್ಲಿ ಬಿಜೆಪಿ, ‘ವಾತಾವರಣದಲ್ಲಿ ಕೆಲವೊಮ್ಮೆ ಬೆಳಕು, ಕೆಲವೊಮ್ಮೆ ನೆರಳು ಇರುತ್ತದೆ, ಆದರೆ ರಾಹುಲ್ ಗಾಂಧಿಯವರಿಗೂ ದೇಶವು ಅದೇ ವಾತಾವರಣವನ್ನು ಕಾಯ್ದುಕೊಂಡಿದೆ’ ಎಂದು ಬರೆದುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>