<p><strong>ನವದೆಹಲಿ:</strong> ಬಿಹಾರ ಚುನಾವಣೆಯಲ್ಲಿ ಕಳೆದ ಎರಡು ದಶಕಗಳಲ್ಲಿ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಈ ಅವಧಿಯಲ್ಲಿ ಮಿತ್ರರು ಶತ್ರುಗಳಾಗಿದ್ದಾರೆ–ಶತ್ರುಗಳು ಮಿತ್ರರಾಗಿದ್ದಾರೆ. ಮೈತ್ರಿಕೂಟದಲ್ಲಿದ್ದರೂ ವಿಧಾನಸಭೆಯ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಹೋರಾಟ ನಡೆಸಿವೆ. 2025ರ ಚುನಾವಣೆ ಇದಕ್ಕಿಂತ ಭಿನ್ನವಾಗಿರಲಿದೆಯಾ?</p>.<p>ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಾಗೂ ಜಾತಿ ಆಧಾರಿತ ಮೀಸಲಾತಿ ವಿಷಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. </p>.<p>ಚುನಾವಣೆ ಘೋಷಣೆಗೆ ಮುನ್ನ ಮೈತ್ರಿ ಸರ್ಕಾರವು ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಸುಶಾಸನ ಹಾಗೂ ಹಿಂದುತ್ವ ಪ್ರತಿಪಾದಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ನೆಚ್ಚಿಕೊಂಡಿದೆ. </p>.<p>2000ರಿಂದ ಈಚೆಗೆ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆ ಇಲ್ಲ. ಕಳೆದೆರಡು ದಶಕಗಳಿಂದ ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಕಿಂಗ್ ಮೇಕರ್ ಆಗಿದ್ದಾರೆ. ಪದೇ ಪದೇ ಮೈತ್ರಿಕೂಟ ಬದಲಿಸಿದ್ದಾರೆ. ಮರೆಗುಳಿತನದಿಂದ ಬಳಲುತ್ತಿರುವ ಅವರು ಈ ಸಲ ನಿಸ್ತೇಜರಾಗಿರುವಂತೆ ತೋರುತ್ತಿದೆ. ಜತೆಗೆ, ಎನ್ಡಿಎ ಮಿತ್ರ ಪಕ್ಷದ ನಾಯಕರಾದ ಚಿರಾಗ್ ಪಾಸ್ವಾನ್ ಅವರು ನಿತೀಶ್ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಈ ಚುನಾವಣೆಯಲ್ಲಿ ನಿತೀಶ್ ಅವರನ್ನು ಮತ್ತಷ್ಟು ದುರ್ಬಲಗೊಳಿಸಿ ರಾಜ್ಯ ರಾಜಕಾರಣದಲ್ಲಿ ಅವರನ್ನು ಅಪ್ರಸ್ತುತಗೊಳಿಸುವುದು ಅವರ ಕಾರ್ಯತಂತ್ರ. ಇದಕ್ಕೆ ಬಿಜೆಪಿ ನಾಯಕರ ಪರೋಕ್ಷ ಚಿತಾವಣೆಯೂ ಇದೆ. ಈ ಮೂಲಕ, ರಾಜ್ಯದಲ್ಲಿ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದು ಕಮಲ ಪಾಳಯದ ಹಂಬಲ. 2020ರ ಚುನಾವಣೆಯಲ್ಲಿ ಮಿತ್ರರನ್ನು ನಿತೀಶ್ ವಿರುದ್ಧ ಎತ್ತಿ ಕಟ್ಟುವ ಮೂಲಕ ಬಿಜೆಪಿ ಭಾಗಶಃ ಯಶಸ್ಸು ಸಾಧಿಸಿತ್ತು. </p>.<p>ಇನ್ನೊಂದೆಡೆ, ಆರ್ಜೆಡಿ–ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ’ಮತ ಕಳವು‘ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ರಾಹುಲ್ ಗಾಂಧಿ–ತೇಜಸ್ವಿ ಯಾದವ್ ಜೋಡಿಯ ಮ್ಯಾಜಿಕ್ನಿಂದ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂಬುದು ಮೈತ್ರಿಕೂಟದ ನಾಯಕರ ವಿಶ್ವಾಸ. </p>.<p>ಮೈತ್ರಿಕೂಟವು ಶೇ 30ರಷ್ಟಿರುವ ಮುಸ್ಲಿಂ–ಯಾದವ ಮತದಾರರನ್ನು ಪ್ರಮುಖವಾಗಿ ನೆಚ್ಚಿಕೊಂಡಿದೆ. ಮಂಡಲ್–ಕಮಂಡಲ ಚಳವಳಿಯ ಬಳಿಕ ಪಕ್ಷವು ರಾಜ್ಯದಲ್ಲಿ ನಿಸ್ತೇಜಗೊಂಡಿತ್ತು. 2020ರ ಚುನಾವಣೆಯಲ್ಲಿ ಮೈತ್ರಿಕೂಟವು ಅಧಿಕಾರದಿಂದ ಗಾವುದ ದೂರ ಉಳಿಯಲು ಕಾಂಗ್ರೆಸ್ನ ಕಳಪೆ ಪ್ರದರ್ಶನವು ಪ್ರಮುಖ ಕಾರಣ. </p>.<p>ಈಚಿನ ವರ್ಷಗಳಲ್ಲಿ ಕಾಂಗ್ರೆಸ್ನ ರಾಜ್ಯ ಉಸ್ತುವಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಆಣತಿಯಂತೆ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಚುನಾವಣೆಗೆ ಆರು ತಿಂಗಳು ಇರುವಾಗ ಇಂತಹ ನಾಯಕರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಈ ಜಾಗಕ್ಕೆ ರಾಹುಲ್ ಗಾಂಧಿ ಆಪ್ತರನ್ನು ಕೂರಿಸಲಾಗಿದೆ. ರಾಹುಲ್ ಗಾಂಧಿ ನಡೆಸಿದ ಮತ ಅಧಿಕಾರ ಯಾತ್ರೆಯು ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಹಾಗೂ ಕಾರ್ಯಕರ್ತರಲ್ಲಿ ಕಸುವು ತುಂಬಿದೆ. </p>.<p>ಕಷ್ಟದ ಕ್ಷೇತ್ರಗಳನ್ನು 2020ರ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರಿಂದ ಕಳಪೆ ಸಾಧನೆಗೆ ಕಾರಣ ಎಂಬುದು ಕೈ ನಾಯಕರ ಅಂಬೋಣ. ಪಕ್ಷ ಉತ್ತಮ ನೆಲೆ ಹೊಂದಿರುವ 55–60 ಕ್ಷೇತ್ರಗಳನ್ನು ಈ ಬಾರಿ ಬಿಟ್ಟುಕೊಡಬೇಕು ಎಂದು ಕೈ ಪಾಳಯ ಪಟ್ಟು ಹಿಡಿದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬಿಹಾರ ಚುನಾವಣೆಯಲ್ಲಿ ಕಳೆದ ಎರಡು ದಶಕಗಳಲ್ಲಿ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಈ ಅವಧಿಯಲ್ಲಿ ಮಿತ್ರರು ಶತ್ರುಗಳಾಗಿದ್ದಾರೆ–ಶತ್ರುಗಳು ಮಿತ್ರರಾಗಿದ್ದಾರೆ. ಮೈತ್ರಿಕೂಟದಲ್ಲಿದ್ದರೂ ವಿಧಾನಸಭೆಯ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಹೋರಾಟ ನಡೆಸಿವೆ. 2025ರ ಚುನಾವಣೆ ಇದಕ್ಕಿಂತ ಭಿನ್ನವಾಗಿರಲಿದೆಯಾ?</p>.<p>ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಾಗೂ ಜಾತಿ ಆಧಾರಿತ ಮೀಸಲಾತಿ ವಿಷಯಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. </p>.<p>ಚುನಾವಣೆ ಘೋಷಣೆಗೆ ಮುನ್ನ ಮೈತ್ರಿ ಸರ್ಕಾರವು ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಸುಶಾಸನ ಹಾಗೂ ಹಿಂದುತ್ವ ಪ್ರತಿಪಾದಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ನೆಚ್ಚಿಕೊಂಡಿದೆ. </p>.<p>2000ರಿಂದ ಈಚೆಗೆ ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಉದಾಹರಣೆ ಇಲ್ಲ. ಕಳೆದೆರಡು ದಶಕಗಳಿಂದ ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಕಿಂಗ್ ಮೇಕರ್ ಆಗಿದ್ದಾರೆ. ಪದೇ ಪದೇ ಮೈತ್ರಿಕೂಟ ಬದಲಿಸಿದ್ದಾರೆ. ಮರೆಗುಳಿತನದಿಂದ ಬಳಲುತ್ತಿರುವ ಅವರು ಈ ಸಲ ನಿಸ್ತೇಜರಾಗಿರುವಂತೆ ತೋರುತ್ತಿದೆ. ಜತೆಗೆ, ಎನ್ಡಿಎ ಮಿತ್ರ ಪಕ್ಷದ ನಾಯಕರಾದ ಚಿರಾಗ್ ಪಾಸ್ವಾನ್ ಅವರು ನಿತೀಶ್ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ. ಈ ಚುನಾವಣೆಯಲ್ಲಿ ನಿತೀಶ್ ಅವರನ್ನು ಮತ್ತಷ್ಟು ದುರ್ಬಲಗೊಳಿಸಿ ರಾಜ್ಯ ರಾಜಕಾರಣದಲ್ಲಿ ಅವರನ್ನು ಅಪ್ರಸ್ತುತಗೊಳಿಸುವುದು ಅವರ ಕಾರ್ಯತಂತ್ರ. ಇದಕ್ಕೆ ಬಿಜೆಪಿ ನಾಯಕರ ಪರೋಕ್ಷ ಚಿತಾವಣೆಯೂ ಇದೆ. ಈ ಮೂಲಕ, ರಾಜ್ಯದಲ್ಲಿ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮುವುದು ಕಮಲ ಪಾಳಯದ ಹಂಬಲ. 2020ರ ಚುನಾವಣೆಯಲ್ಲಿ ಮಿತ್ರರನ್ನು ನಿತೀಶ್ ವಿರುದ್ಧ ಎತ್ತಿ ಕಟ್ಟುವ ಮೂಲಕ ಬಿಜೆಪಿ ಭಾಗಶಃ ಯಶಸ್ಸು ಸಾಧಿಸಿತ್ತು. </p>.<p>ಇನ್ನೊಂದೆಡೆ, ಆರ್ಜೆಡಿ–ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ’ಮತ ಕಳವು‘ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ರಾಹುಲ್ ಗಾಂಧಿ–ತೇಜಸ್ವಿ ಯಾದವ್ ಜೋಡಿಯ ಮ್ಯಾಜಿಕ್ನಿಂದ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂಬುದು ಮೈತ್ರಿಕೂಟದ ನಾಯಕರ ವಿಶ್ವಾಸ. </p>.<p>ಮೈತ್ರಿಕೂಟವು ಶೇ 30ರಷ್ಟಿರುವ ಮುಸ್ಲಿಂ–ಯಾದವ ಮತದಾರರನ್ನು ಪ್ರಮುಖವಾಗಿ ನೆಚ್ಚಿಕೊಂಡಿದೆ. ಮಂಡಲ್–ಕಮಂಡಲ ಚಳವಳಿಯ ಬಳಿಕ ಪಕ್ಷವು ರಾಜ್ಯದಲ್ಲಿ ನಿಸ್ತೇಜಗೊಂಡಿತ್ತು. 2020ರ ಚುನಾವಣೆಯಲ್ಲಿ ಮೈತ್ರಿಕೂಟವು ಅಧಿಕಾರದಿಂದ ಗಾವುದ ದೂರ ಉಳಿಯಲು ಕಾಂಗ್ರೆಸ್ನ ಕಳಪೆ ಪ್ರದರ್ಶನವು ಪ್ರಮುಖ ಕಾರಣ. </p>.<p>ಈಚಿನ ವರ್ಷಗಳಲ್ಲಿ ಕಾಂಗ್ರೆಸ್ನ ರಾಜ್ಯ ಉಸ್ತುವಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಆಣತಿಯಂತೆ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಚುನಾವಣೆಗೆ ಆರು ತಿಂಗಳು ಇರುವಾಗ ಇಂತಹ ನಾಯಕರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಈ ಜಾಗಕ್ಕೆ ರಾಹುಲ್ ಗಾಂಧಿ ಆಪ್ತರನ್ನು ಕೂರಿಸಲಾಗಿದೆ. ರಾಹುಲ್ ಗಾಂಧಿ ನಡೆಸಿದ ಮತ ಅಧಿಕಾರ ಯಾತ್ರೆಯು ಪಕ್ಷದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಹಾಗೂ ಕಾರ್ಯಕರ್ತರಲ್ಲಿ ಕಸುವು ತುಂಬಿದೆ. </p>.<p>ಕಷ್ಟದ ಕ್ಷೇತ್ರಗಳನ್ನು 2020ರ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರಿಂದ ಕಳಪೆ ಸಾಧನೆಗೆ ಕಾರಣ ಎಂಬುದು ಕೈ ನಾಯಕರ ಅಂಬೋಣ. ಪಕ್ಷ ಉತ್ತಮ ನೆಲೆ ಹೊಂದಿರುವ 55–60 ಕ್ಷೇತ್ರಗಳನ್ನು ಈ ಬಾರಿ ಬಿಟ್ಟುಕೊಡಬೇಕು ಎಂದು ಕೈ ಪಾಳಯ ಪಟ್ಟು ಹಿಡಿದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>