'ಮೂರು ಮಸೂದೆಗಳನ್ನು ರೂಪಿಸಿದಾಗ ಬಿಜೆಪಿ ಯಾರೊಂದಿಗೂ ಸಮಾಲೋಚನೆ ನಡೆಸಿಲ್ಲ. ನಾವೂ ಎನ್ಡಿಎಯ ಭಾಗವಾಗಿದ್ದೇವೆ. ನಾವೂ ರೈತರ ಮಕ್ಕಳು. ಅವರು ನಮ್ಮೊಂದಿಗೆ ಮಾತನಾಡಬೇಕಿತ್ತು. ರೈತರಿಗೆ ಸಂಬಂಧಿಸಿದಂತೆ ಇಂಥದ್ದೊಂದು ಮಸೂದೆಯನ್ನು ರೂಪಿಸುತ್ತಿರುವುದಾಗಿ ಬಿಜೆಪಿ ನಮಗೆ ಹೇಳಬೇಕಾಗಿತ್ತು. ಈ ಮಸೂದೆಗಳನ್ನು ರೂಪಿಸಿದ್ದು ಯಾರೆಂದು ಗೊತ್ತಿಲ್ಲ. ಮಸೂದೆಗಳನ್ನು ತಂದರು, ಅಂಗೀಕರಿಸಿದರು,'ಎಂದು ಬೆನಿವಾಲ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.