ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಬಿಜೆಪಿ, ಎಸ್ಪಿ ನಡುವೆ ಕೆಸರೆರಚಾಟ

Published : 5 ಆಗಸ್ಟ್ 2024, 0:14 IST
Last Updated : 5 ಆಗಸ್ಟ್ 2024, 0:14 IST
ಫಾಲೋ ಮಾಡಿ
Comments
ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ಮೊಯಿದ್‌ ಖಾನ್‌ಗೆ ಸೇರಿದ ಬೇಕರಿಯನ್ನು ಜಿಲ್ಲಾಡಳಿತ ಹೊಡೆದುರುಳಿಸಿತು– ಪಿಟಿಐ ಚಿತ್ರ
ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ಮೊಯಿದ್‌ ಖಾನ್‌ಗೆ ಸೇರಿದ ಬೇಕರಿಯನ್ನು ಜಿಲ್ಲಾಡಳಿತ ಹೊಡೆದುರುಳಿಸಿತು– ಪಿಟಿಐ ಚಿತ್ರ
‘ಗೂಂಡಾಗಿರಿ ಅರಾಜಕತೆಯೇ ಎಸ್ಪಿ ಡಿಎನ್‌ಎ’
ಬಲ್ಲಿಯಾ: ‘ಅಯೋಧ್ಯೆಯಲ್ಲಿ ನಡೆದ ಅತ್ಯಾಚಾರದ ಅಪರಾಧಿಗಳಿಗೆ ಮುಂದಿನ ಪೀಳಿಗೆಯೂ ನೆನಪಿಟ್ಟುಕೊಳ್ಳುವಷ್ಟು ಶಿಕ್ಷೆ ನೀಡಲಾಗುವುದು’ ಎಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ಬೃಜೇಶ್‌ ಪಾಠಕ್‌ ಎಚ್ಚರಿಕೆ ನೀಡಿದ್ದಾರೆ. ಆರೋಪಿಯ ಡಿಎನ್‌ಎ ಪರೀಕ್ಷೆ ನಡೆಸಬೇಕು ಅತ್ಯಾಚಾರ ಸಂತ್ರಸ್ತೆಗೆ ಸೂಕ್ತ ರಕ್ಷಣೆ ನೀಡಲು ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಸಿಂಗ್‌ ಯಾದವ್‌ ಆಗ್ರಹಿಸಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಠಕ್‌ ‘ಗೂಂಡಾಗಿರಿ ಅರಾಜಕತೆಯು ಸಮಾಜವಾದಿ ಪಕ್ಷದ ಡಿಎನ್‌ಎ ಆಗಿದೆ’ ಎಂದರು. ‘ಕೊಲೆಗಡುಕರು ಹಾಗೂ ಅತ್ಯಾಚಾರಿಗಳಿಗೆ ರಕ್ಷಣೆ ನೀಡುವುದು ಸಮಾಜವಾದಿ ಪಕ್ಷದ ಹಳೆಯ ಚಾಳಿಯಾಗಿದೆ’ ಎಂದು ಈ ವೇಳೆ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT