<p><strong>ನಾಗ್ಪುರ:</strong> ಜಾತಿ ಹಾಗೂ ಧರ್ಮದ ಬೇಧವಿಲ್ಲದೆ ಎಲ್ಲರಿಗಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಬಿಜೆಪಿ ಸಿದ್ಧಾಂತ ಬೋಧಿಸುತ್ತದೆ. ಅದು ಮುಸ್ಲಿಮರ ವಿರುದ್ಧವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.</p>.ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಕ್ರಮಕ್ಕೆ ಆಗ್ರಹ.<p>‘ಜನವರಿ 15ರಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಕೂಟ ಬಹುಮತ ಪಡೆದುಕೊಂಡರೆ ಜನರ ಆಕಾಂಕ್ಷೆ ಹಾಗೂ ಕನಸುಗಳು ಈಡೇರುತ್ತದೆ. ಗೆದ್ದವರು ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ನಾನೇ ಗ್ಯಾರಂಟಿ’ ಎಂದು ಅವರು ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.</p><p>ಚುನಾವಣೆ ಸಂಬಂಧ ಮೂರು ಸಾರ್ವಜನಿಕ ಸಮಾವೇಶ ನಡೆಸಿದ ಅವರು, ಬಿಜೆಪಿ ಬಗ್ಗೆ ಇರುವ ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.</p>.ಪುತ್ತೂರು | ಶಿಕ್ಷಕಿಯ ನಿಂದಿಸಿದ ಶಾಸಕ ಕ್ಷಮೆಯಾಚಿಸಲಿ: ಬಿಜೆಪಿ ಆಗ್ರಹ.<p>ನಾವು ಮುಸ್ಲಿಮರ ವಿರೋಧಿಗಳಲ್ಲ, ಆದರೆ ನಾವು ಭಯೋತ್ಪಾದನೆ ಹಾಗೂ ಪಾಕಿಸ್ತಾನದ ವಿರುದ್ಧ. ದೇಶಕ್ಕಾಗಿ ತ್ಯಾಗ ಮಾಡುವ ಮುಸ್ಲಿಮರು ಹಿಂದೂಗಳಷ್ಟೇ ನಮಗೆ ಆಪ್ತರು. ಒಬ್ಬ ಮಸೀದಿ, ಗುರುದ್ವಾರ ಅಥವಾ ಬುದ್ಧವಿಹಾರಕ್ಕೆ ಹೋಗಬಹುದು; ಆದರೆ ನಮ್ಮ ರಕ್ತ ಒಂದೇ. ನಾವು ಭಾರತೀಯರು, ನಾವು ಎಲ್ಲರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದಾರೆ.</p><p>ಬಿಜೆಪಿ–ಶಿವಸೇನಾ ಮೈತ್ರಿಗೆ ಪೂರ್ಣ ಬಹುಮತ ಸಿಕ್ಕಿದರೆ ನಿಮ್ಮ ಆಸೆ, ಆಕಾಂಕ್ಷೆ ಹಾಗೂ ಕನಸುಗಳು ಸಾಕಾರವಾಗಲಿದೆ ಎಂದು ಹೇಳಿದ್ದಾರೆ.</p>.ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ: ರಫ್ತು ಹೆಚ್ಚಳದ ಅಗತ್ಯವಿದೆ ಎಂದ ಗಡ್ಕರಿ.<p>‘ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಾನು ಗ್ಯಾರಂಟಿ ನೀಡುತ್ತೇನೆ’ ಎಂದು ಹೇಳಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಹಾಗೂ ತಾನು ಮಾಡಿದ ಮೂಲಭೂತ ಸೌಕರ್ಯಗಳ ಯೋಜನೆಗಳು ಜನರ ಮುಂದಿಟ್ಟಿದ್ದಾರೆ.</p><p>‘ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸಾಚಾರ ನಡೆಯಲಿದೆ ಎಂದು ವಿರೋಧ ಪಕ್ಷದ ನಾಯಕರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಯಾರೊಂದಿಗೂ ಬೇಧ ಮಾಡದೆ ಕೆಲಸ ಮಾಡುಬೇಕು ಎನ್ನುವುದನ್ನು ಬಿಜೆಪಿ ಸಿದ್ಧಾಂತ ಹೇಳುತ್ತದೆ’ ಎಂದು ನಾಗ್ಪುರ ಉತ್ತರದಲ್ಲಿ ಮಾತನಾಡುವಾಗ ಹೇಳಿದ್ದಾರೆ.</p>.ಕರ್ನಾಟಕದಲ್ಲಿ 6 ತಿಂಗಳಲ್ಲಿ ₹2,781 ಕೋಟಿ ಟೋಲ್ ಸಂಗ್ರಹ: ಸಚಿವ ನಿತಿನ್ ಗಡ್ಕರಿ .<p>‘ನಾನು ಬಿಜೆಪಿಯ ಕಟ್ಟಾ ಕಾರ್ಯಕರ್ತ ಹಾಗೂ ಅದರ ಸಿದ್ಧಾಂತಗಳ ಹಿಂಬಾಲಕ. ಆದರೆ ನಾನು ನನಗೆ ಮತ ಹಾಕಿದವರ ಹಾಗೂ ಹಾಕದವರ ಪ್ರತಿನಿಧಿ. ಜಾತಿ, ಧರ್ಮ, ಭಾಷೆಗಳಿಗೆ ಅತೀತವಾಗಿ ಎಲ್ಲರಿಗಾಗಿ ನಾನು ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದಾರೆ.</p><p>ಬಿಜೆಪಿ ಸಂವಿಧಾನವನ್ನು ಬದಲಿಸಬೇಕು ಎನ್ನುವ ಸುಳ್ಳು ಮಾಹಿತಿಯನ್ನು ಹರಡಲಾಗುತ್ತದೆ. ಆದರೆ ಕಾಂಗ್ರೆಸ್ 80 ಬಾರಿ ಸಂವಿಧಾನವನ್ನು ಬದಲಿಸಲು ಯತ್ನಿಸಿದೆ ಎಂದರು.</p>.₹20 ಲಕ್ಷ ಕೋಟಿಗೆ ಇ.ವಿ.ವಾಹನ ಮಾರುಕಟ್ಟೆ: ನಿತಿನ್ ಗಡ್ಕರಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ:</strong> ಜಾತಿ ಹಾಗೂ ಧರ್ಮದ ಬೇಧವಿಲ್ಲದೆ ಎಲ್ಲರಿಗಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಬಿಜೆಪಿ ಸಿದ್ಧಾಂತ ಬೋಧಿಸುತ್ತದೆ. ಅದು ಮುಸ್ಲಿಮರ ವಿರುದ್ಧವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.</p>.ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಕ್ರಮಕ್ಕೆ ಆಗ್ರಹ.<p>‘ಜನವರಿ 15ರಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ–ಶಿವಸೇನಾ ಮೈತ್ರಿಕೂಟ ಬಹುಮತ ಪಡೆದುಕೊಂಡರೆ ಜನರ ಆಕಾಂಕ್ಷೆ ಹಾಗೂ ಕನಸುಗಳು ಈಡೇರುತ್ತದೆ. ಗೆದ್ದವರು ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ನಾನೇ ಗ್ಯಾರಂಟಿ’ ಎಂದು ಅವರು ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.</p><p>ಚುನಾವಣೆ ಸಂಬಂಧ ಮೂರು ಸಾರ್ವಜನಿಕ ಸಮಾವೇಶ ನಡೆಸಿದ ಅವರು, ಬಿಜೆಪಿ ಬಗ್ಗೆ ಇರುವ ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.</p>.ಪುತ್ತೂರು | ಶಿಕ್ಷಕಿಯ ನಿಂದಿಸಿದ ಶಾಸಕ ಕ್ಷಮೆಯಾಚಿಸಲಿ: ಬಿಜೆಪಿ ಆಗ್ರಹ.<p>ನಾವು ಮುಸ್ಲಿಮರ ವಿರೋಧಿಗಳಲ್ಲ, ಆದರೆ ನಾವು ಭಯೋತ್ಪಾದನೆ ಹಾಗೂ ಪಾಕಿಸ್ತಾನದ ವಿರುದ್ಧ. ದೇಶಕ್ಕಾಗಿ ತ್ಯಾಗ ಮಾಡುವ ಮುಸ್ಲಿಮರು ಹಿಂದೂಗಳಷ್ಟೇ ನಮಗೆ ಆಪ್ತರು. ಒಬ್ಬ ಮಸೀದಿ, ಗುರುದ್ವಾರ ಅಥವಾ ಬುದ್ಧವಿಹಾರಕ್ಕೆ ಹೋಗಬಹುದು; ಆದರೆ ನಮ್ಮ ರಕ್ತ ಒಂದೇ. ನಾವು ಭಾರತೀಯರು, ನಾವು ಎಲ್ಲರಿಗಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದಾರೆ.</p><p>ಬಿಜೆಪಿ–ಶಿವಸೇನಾ ಮೈತ್ರಿಗೆ ಪೂರ್ಣ ಬಹುಮತ ಸಿಕ್ಕಿದರೆ ನಿಮ್ಮ ಆಸೆ, ಆಕಾಂಕ್ಷೆ ಹಾಗೂ ಕನಸುಗಳು ಸಾಕಾರವಾಗಲಿದೆ ಎಂದು ಹೇಳಿದ್ದಾರೆ.</p>.ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ: ರಫ್ತು ಹೆಚ್ಚಳದ ಅಗತ್ಯವಿದೆ ಎಂದ ಗಡ್ಕರಿ.<p>‘ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಾನು ಗ್ಯಾರಂಟಿ ನೀಡುತ್ತೇನೆ’ ಎಂದು ಹೇಳಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಹಾಗೂ ತಾನು ಮಾಡಿದ ಮೂಲಭೂತ ಸೌಕರ್ಯಗಳ ಯೋಜನೆಗಳು ಜನರ ಮುಂದಿಟ್ಟಿದ್ದಾರೆ.</p><p>‘ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂಸಾಚಾರ ನಡೆಯಲಿದೆ ಎಂದು ವಿರೋಧ ಪಕ್ಷದ ನಾಯಕರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಯಾರೊಂದಿಗೂ ಬೇಧ ಮಾಡದೆ ಕೆಲಸ ಮಾಡುಬೇಕು ಎನ್ನುವುದನ್ನು ಬಿಜೆಪಿ ಸಿದ್ಧಾಂತ ಹೇಳುತ್ತದೆ’ ಎಂದು ನಾಗ್ಪುರ ಉತ್ತರದಲ್ಲಿ ಮಾತನಾಡುವಾಗ ಹೇಳಿದ್ದಾರೆ.</p>.ಕರ್ನಾಟಕದಲ್ಲಿ 6 ತಿಂಗಳಲ್ಲಿ ₹2,781 ಕೋಟಿ ಟೋಲ್ ಸಂಗ್ರಹ: ಸಚಿವ ನಿತಿನ್ ಗಡ್ಕರಿ .<p>‘ನಾನು ಬಿಜೆಪಿಯ ಕಟ್ಟಾ ಕಾರ್ಯಕರ್ತ ಹಾಗೂ ಅದರ ಸಿದ್ಧಾಂತಗಳ ಹಿಂಬಾಲಕ. ಆದರೆ ನಾನು ನನಗೆ ಮತ ಹಾಕಿದವರ ಹಾಗೂ ಹಾಕದವರ ಪ್ರತಿನಿಧಿ. ಜಾತಿ, ಧರ್ಮ, ಭಾಷೆಗಳಿಗೆ ಅತೀತವಾಗಿ ಎಲ್ಲರಿಗಾಗಿ ನಾನು ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದಾರೆ.</p><p>ಬಿಜೆಪಿ ಸಂವಿಧಾನವನ್ನು ಬದಲಿಸಬೇಕು ಎನ್ನುವ ಸುಳ್ಳು ಮಾಹಿತಿಯನ್ನು ಹರಡಲಾಗುತ್ತದೆ. ಆದರೆ ಕಾಂಗ್ರೆಸ್ 80 ಬಾರಿ ಸಂವಿಧಾನವನ್ನು ಬದಲಿಸಲು ಯತ್ನಿಸಿದೆ ಎಂದರು.</p>.₹20 ಲಕ್ಷ ಕೋಟಿಗೆ ಇ.ವಿ.ವಾಹನ ಮಾರುಕಟ್ಟೆ: ನಿತಿನ್ ಗಡ್ಕರಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>