ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿಬಿಜೆಪಿ ಕೈಗೊಂಡಿರುವ ಪ್ರಮುಖ ಕಾರ್ಯಕ್ರಮಗಳ ಬಗ್ಗೆಯೂ ತಿಳಿಸಿದ ನಡ್ಡಾ, ‘ವಿದ್ಯುತ್ ಸಂಪರ್ಕ ಹೊಂದಿರದಿದ್ದ18 ಸಾವಿರ ಹಳ್ಳಿಗಳಿಗೆ ಉಜ್ವಲಾ ಯೋಜನೆ ನೀಡಲಾಗಿದೆ. ಇದು ಸುಮಾರು 8 ಕೋಟಿ ಜನರನ್ನು ತಲುಪಿದೆ. ನವಭಾರತ ಎಂದರೆ ಇದು. ಎಲ್ಲ ಕಡೆಗಳಲ್ಲಿಯೂ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ. ಎಲ್ಲರೂ ರೈತರ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದೆ’ ಎಂದು ಮನವರಿಕೆ ಮಾಡಿಕೊಟ್ಟರು.