ನವದೆಹಲಿ: ಬಿಜೆಪಿ ನಾಯಕಿ ಹಾಗೂ ಪುದುಚೇರಿಯ ಮಾಜಿ ಲೆಪ್ಟಿನಂಟ್ ಗವರ್ನರ್ ಕಿರಣ್ ಬೇಡಿ ಅವರು ಸಿಖ್ರ ಬಗ್ಗೆ ಅವಹೇಳನಕಾರಿ ಹಾಸ್ಯಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಿರಣ್ ಬೇಡಿ ಅವರ ವಿರುದ್ಧ ಸಿಖ್ ಸಮುದಾಯದ ಅನೇಕರು ಕಿಡಿಕಾರಿದ್ಧಾರೆ. ಅಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಚೆನ್ನೈನಲ್ಲಿ ಸೋಮವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಖ್ರ ಸರ್ದಾರ್ಜಿಗಳ ಬಗ್ಗೆ ಕೀಳು ಅಭಿರುಚಿಯ ವ್ಯಂಗ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿ ಕ್ಷಮೆ ಕೇಳಿರುವ ಕಿರಣ್ ಬೇಡಿ ಅವರು, ‘ನನ್ನ ಸಮುದಾಯದ ಬಗ್ಗೆ ನಾನು ಅತೀವ ಗೌರವ ಹೊಂದಿದ್ದೇನೆ. ನಿನ್ನೆ ನಾನು ಆಡಿದ ಮಾತುಗಳಿಗೆ ನಾನೇ ಜವಾಬ್ದಾರಿ. ಇದನ್ನು ಯಾರ ಮನಸ್ಸು ನೋಯಿಸಲು ಆಡಿರಲಿಲ್ಲ. ಇದಕ್ಕಾಗಿ ಬಹಿರಂಗವಾಗಿ ನಿಮ್ಮ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.
I have highest regards for my community. I am a devotee of Baba Nanak Dev ji. What I said to the audience even at my own cost (as I also belong here) be kindly not misread.I seek forgiveness for this.I am the last person to cause any hurt. I believe in Seva & loving kindness 🙏