‘ತೃಣಮೂಲ ಕಾಂಗ್ರೆಸ್ ಮತ್ತು ಮುಕುಲ್ ರಾಯ್ ಅವರ ನಡುವೆ ‘ಘರ್ ವಾಪ್ಸಿ’ಯ (ಪಕ್ಷಕ್ಕೆ ಹಿಂತಿರುಗುವ) ಮಾತುಕತೆಗಳು ನಡೆಯುತ್ತಿವೆ,’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಮುಕುಲ್ ಅವರ ಮರುಸೇರ್ಪಡೆ ಇನ್ನೂ ಖಚಿತವಾಗಿಲ್ಲ. ಈ ಕುರಿತು ಪ್ರಜಾವಾಣಿ ಸೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.