ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗಕ್ಕೂ ಕುಸಿತಕ್ಕೂ ಸಂಬಂಧವಿಲ್ಲ: ಕೇಂದ್ರ ಸರ್ಕಾರಕ್ಕೆ ಎನ್‌ಟಿಪಿಸಿ ಮಾಹಿತಿ

Last Updated 13 ಜನವರಿ 2023, 19:32 IST
ಅಕ್ಷರ ಗಾತ್ರ

ನವದೆಹಲಿ: ತ‍ಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯನ್ನು ಸಂಪರ್ಕಿಸುವ 12 ಕಿಲೋ ಮೀಟರ್ ಉದ್ದದ ಸುರಂಗವು ಜೋಶಿಮಠದಿಂದ 1 ಕಿ.ಮೀ. ದೂರದಲ್ಲಿದ್ದು, ಆ ಪಟ್ಟಣ ಕುಸಿಯುತ್ತಿರುವುದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಎನ್‌ಟಿಪಿಸಿ ಕಂಪನಿಯು ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಈ ಸುರಂಗವು ನೆಲ ಮಟ್ಟದಿಂದ ಕನಿಷ್ಠ ಒಂದು ಕಿ.ಮೀ. ಆಳದಲ್ಲಿದೆ ಎಂದು ಕೂಡ ಕಂಪನಿ ಹೇಳಿದೆ. ಕೇಂದ್ರ ಇಂಧನ ಸಚಿವಾಲಯವು, ಎನ್‌ಟಿಪಿಸಿ ಅಧಿಕಾರಿಗಳನ್ನು ಕರೆಸಿ, ಜೋಶಿಮಠ ಕುಸಿಯುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಜನವರಿ 10ರಂದು ಸೂಚಿಸಿತ್ತು. ಇದಕ್ಕೆ ಉತ್ತರವಾಗಿ ಕಂಪನಿಯು ಈ ವಿವರಣೆ ನೀಡಿದೆ. ಸುರಂಗವು ಜೋಶಿಮಠದ ಅಡಿಯಲ್ಲಿ ಸಾಗಿಲ್ಲ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT