ಇಷ್ಟೊಂದು ಕಷ್ಟಪಟ್ಟು ಚಂದ್ವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದರೂ ಅಲ್ಲಿಯೂ ಚಿಕಿತ್ಸೆ ಲಭಿಸಿಲ್ಲ. ಆರೋಗ್ಯ ಕೇಂದ್ರವು ಆಕೆಯನ್ನು ಲತೇಹಾರ್ ಸರ್ದಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆಹೇಳಿತು.ಅಲ್ಲಿಂದ ಆ್ಯಂಬುಲೆನ್ಸ್ನಲ್ಲಿ 27 ಕಿ.ಮೀ ದೂರದಲ್ಲಿರುವ ಆಸ್ಪಕ್ರೆಗೆ ಕರೆದೊಯ್ಯಲಾಯಿತು.ಆ ಆಸ್ಪತ್ರೆಯ ವೈದ್ಯರು ರಾಂಚಿಯಲ್ಲಿರುವ ರಾಜೇಂದ್ರ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಆರ್ಐಎಂಎಸ್) ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದು, ಕೊನೆಗೆ ಆ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.