<p><strong>ಮುಂಬೈ</strong> : ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಲಂಚ ಪಡೆದ ಆರೋಪದಡಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.</p>.<p>ಮಂದಾರ ಅಶೋಕ ತಾರಿ ಅವರನ್ನು ಪ್ರಮುಖ ಆರೋಪಿಯೆಂದು ಗುರುತಿಸಲಾಗಿದ್ದು, ಅವರು ಘಾಟಕೋಪರ ಪೂರ್ವದಲ್ಲಿರುವ ಬಿಎಂಸಿಯ ಪೂರ್ವ ವಲಯ ಕಚೇರಿಯ ನಿಯೋಜಿತ ಅಧಿಕಾರಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ತಾರಿ, ಕಟ್ಟಡ ಅಕ್ರಮ ಮಹಡಿಗಳನ್ನು ನೆಲಸಮಗೊಳಿಸದಿರಲು ಡೆವಲಪರ್ಗಳಿಂದ ₹2 ಕೋಟಿ ಲಂಚವನ್ನು ಕೇಳಿದ್ದು, ಮುಂದಿನ ದಿನಗಳಲ್ಲಿಯೂ ಡೆವಲಪರ್ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು ಎಂದು ಅಧಿಕಾರಿ ಹೇಳಿದರು.</p>.<p>ಆದರೆ, ಡೆವಲಪರ್ ಎಸಿಬಿಯನ್ನು ಸಂಪರ್ಕಿಸಿ ತಾರಿ ವಿರುದ್ಧ ಜುಲೈ 31ರಂದು ದೂರು ನೀಡಿದ್ದಾರೆ.</p>.<p>ಮೊಹಮ್ಮದ್ ಶಹಜದಾ ಯಾಸಿನ್ ಶಾ ಮತ್ತು ಪ್ರತೀಕ್ ವಿಜಯ್ ಪಿಸೆ ಎಂಬ ಇಬ್ಬರು ಮಂಗಳವಾರ ₹75 ಲಕ್ಷ ಲಂಚವನ್ನು ದೂರುದಾರರಿಂದ ವಸೂಲಿ ಮಾಡುತ್ತಿದ್ದಾಗ ಮುಂಬೈ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಾರಿ ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong> : ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಲಂಚ ಪಡೆದ ಆರೋಪದಡಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.</p>.<p>ಮಂದಾರ ಅಶೋಕ ತಾರಿ ಅವರನ್ನು ಪ್ರಮುಖ ಆರೋಪಿಯೆಂದು ಗುರುತಿಸಲಾಗಿದ್ದು, ಅವರು ಘಾಟಕೋಪರ ಪೂರ್ವದಲ್ಲಿರುವ ಬಿಎಂಸಿಯ ಪೂರ್ವ ವಲಯ ಕಚೇರಿಯ ನಿಯೋಜಿತ ಅಧಿಕಾರಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ತಾರಿ, ಕಟ್ಟಡ ಅಕ್ರಮ ಮಹಡಿಗಳನ್ನು ನೆಲಸಮಗೊಳಿಸದಿರಲು ಡೆವಲಪರ್ಗಳಿಂದ ₹2 ಕೋಟಿ ಲಂಚವನ್ನು ಕೇಳಿದ್ದು, ಮುಂದಿನ ದಿನಗಳಲ್ಲಿಯೂ ಡೆವಲಪರ್ಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು ಎಂದು ಅಧಿಕಾರಿ ಹೇಳಿದರು.</p>.<p>ಆದರೆ, ಡೆವಲಪರ್ ಎಸಿಬಿಯನ್ನು ಸಂಪರ್ಕಿಸಿ ತಾರಿ ವಿರುದ್ಧ ಜುಲೈ 31ರಂದು ದೂರು ನೀಡಿದ್ದಾರೆ.</p>.<p>ಮೊಹಮ್ಮದ್ ಶಹಜದಾ ಯಾಸಿನ್ ಶಾ ಮತ್ತು ಪ್ರತೀಕ್ ವಿಜಯ್ ಪಿಸೆ ಎಂಬ ಇಬ್ಬರು ಮಂಗಳವಾರ ₹75 ಲಕ್ಷ ಲಂಚವನ್ನು ದೂರುದಾರರಿಂದ ವಸೂಲಿ ಮಾಡುತ್ತಿದ್ದಾಗ ಮುಂಬೈ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಾರಿ ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>