<p><strong>ಅಯೋಧ್ಯೆ: </strong>ಇಲ್ಲಿನ ರಾಮ ಜನ್ಮಭೂಮಿ ಪ್ರದೇಶವು ಬೌದ್ಧರ ಸ್ಥಳವಾಗಿತ್ತು ಎಂದು ಬೌದ್ಧ ಬಿಕ್ಕುಗಳು ಪ್ರತಿಪಾದಿಸಿದ್ದಾರೆ. ರಾಮ ಜನ್ಮಭೂಮಿ ಸ್ಥಳದಲ್ಲಿ ಯುನೆಸ್ಕೊದಿಂದ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಉತ್ಖನನ ನಡೆಯಬೇಕು ಎಂದು ಆಗ್ರಹಿಸಿ ಮಂಗಳವಾರ ಉಪವಾಸ ಮತ್ತು ಧರಣಿ ನಡೆಸಿದ್ದಾರೆ.</p>.<p>ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿ ಹೊರಗೆ ಧರಣಿ ನಡೆಸಿದ ಬಿಕ್ಕುಗಳು, ಈ ಹಿಂದೆ ಜನ್ಮಭೂಮಿಯಲ್ಲಿ ನಡೆಸಿದ ಉತ್ಖನನದ ವೇಳೆ ದೊರತಿರುವ ವಸ್ತುಗಳನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.</p>.<p>ರಾಮ ಮಂದಿರ ನಿರ್ಮಾಣಕ್ಕಾಗಿ ಸ್ಥಳವನ್ನು ಸಮತಟ್ಟು ಮಾಡುವ ವೇಳೆ ಮೇ ತಿಂಗಳಲ್ಲಿ ಒಂದು ಶಿವಲಿಂಗ, ಏಳು ಕಪ್ಪು ಕಲ್ಲುಗಂಬಗಳು, ಆರು ಕೆಂಪು ಕಲ್ಲುಗಂಬಗಳು, ನಾಲ್ಕು ದೇವ–ದೇವತೆಯರ ಮುರಿದ ವಿಗ್ರಹಗಳು ದೊರೆತಿವೆ ಎಂದು ಮಂದಿರ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಟ್ರಸ್ಟ್ ಹೇಳಿತ್ತು.</p>.<p>ರಾಮ ಜನ್ಮಭೂಮಿ ಪ್ರದೇಶದಲ್ಲಿ ದೊರೆತ ವಸ್ತುಗಳು ಬೌದ್ಧ ಸಂಸ್ಕೃತಿಗೆ ಸೇರಿದ್ದು. ಹೀಗಾಗಿ ಅಲ್ಲಿ ಯುನೆಸ್ಕೊದಿಂದಲೇ ಉತ್ಖನನ ನಡೆಯಬೇಕು. ತಕ್ಷಣವೇ ರಾಮ ಮಂದಿರ ನಿರ್ಮಾಣ ಕಾರ್ಯಸ್ಥಗಿತಗೊಳಿಸಬೇಕು ಎಂದು ಬಿಕ್ಕುಗಳು ಆಗ್ರಹಿಸಿದ್ದಾರೆ.</p>.<p>ಅಯೋಧ್ಯೆಯೇ ಪುರಾತನ ಸಾಕೇತ ನಗರವಾಗಿದ್ದು, ಬೌದ್ಧ ಧರ್ಮದ ಕೇಂದ್ರವಾಗಿತ್ತು ಎಂಬುದು ಬೌದ್ಧ ಧರ್ಮದ ಅನುಯಾಯಿಗಳ ನಂಬಿಕೆಯಾಗಿದೆ.</p>.<p>‘ರಾಮ ಜನ್ಮಭೂಮಿಗೆ ಸಂಬಂಧಿಸಿದ ನಮ್ಮ ಜ್ಞಾಪಕ ಪತ್ರಗಳನ್ನು ಅಯೋಧ್ಯೆಯ ಆಡಳಿತದ ಮೂಲಕ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಕಳುಹಿಸಿದ್ದೇವೆ’ ಎಂದು ಆಜಾದ್ ಬೌದ್ಧ ಧರ್ಮ ಸೇನಾದ ಸದಸ್ಯರು ತಿಳಿಸಿದ್ದಾರೆ.</p>.<p>‘ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಇನ್ನು ಒಂದು ತಿಂಗಳ ಒಳಗೆ ಸ್ಥಗಿತಗೊಳಿಸಿ ಆ ಪ್ರದೇಶದ ಉತ್ಖನನಕ್ಕೆ ಯುನೆಸ್ಕೊಗೆ ಅವಕಾಶ ಮಾಡಿಕೊಡದಿದ್ದರೆ ನಾವು ಮತ್ತೆ ಹೋರಾಟ ಆರಂಭಿಸಲಿದ್ದೇವೆ’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಯೋಧ್ಯೆ: </strong>ಇಲ್ಲಿನ ರಾಮ ಜನ್ಮಭೂಮಿ ಪ್ರದೇಶವು ಬೌದ್ಧರ ಸ್ಥಳವಾಗಿತ್ತು ಎಂದು ಬೌದ್ಧ ಬಿಕ್ಕುಗಳು ಪ್ರತಿಪಾದಿಸಿದ್ದಾರೆ. ರಾಮ ಜನ್ಮಭೂಮಿ ಸ್ಥಳದಲ್ಲಿ ಯುನೆಸ್ಕೊದಿಂದ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಉತ್ಖನನ ನಡೆಯಬೇಕು ಎಂದು ಆಗ್ರಹಿಸಿ ಮಂಗಳವಾರ ಉಪವಾಸ ಮತ್ತು ಧರಣಿ ನಡೆಸಿದ್ದಾರೆ.</p>.<p>ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿ ಹೊರಗೆ ಧರಣಿ ನಡೆಸಿದ ಬಿಕ್ಕುಗಳು, ಈ ಹಿಂದೆ ಜನ್ಮಭೂಮಿಯಲ್ಲಿ ನಡೆಸಿದ ಉತ್ಖನನದ ವೇಳೆ ದೊರತಿರುವ ವಸ್ತುಗಳನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.</p>.<p>ರಾಮ ಮಂದಿರ ನಿರ್ಮಾಣಕ್ಕಾಗಿ ಸ್ಥಳವನ್ನು ಸಮತಟ್ಟು ಮಾಡುವ ವೇಳೆ ಮೇ ತಿಂಗಳಲ್ಲಿ ಒಂದು ಶಿವಲಿಂಗ, ಏಳು ಕಪ್ಪು ಕಲ್ಲುಗಂಬಗಳು, ಆರು ಕೆಂಪು ಕಲ್ಲುಗಂಬಗಳು, ನಾಲ್ಕು ದೇವ–ದೇವತೆಯರ ಮುರಿದ ವಿಗ್ರಹಗಳು ದೊರೆತಿವೆ ಎಂದು ಮಂದಿರ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಟ್ರಸ್ಟ್ ಹೇಳಿತ್ತು.</p>.<p>ರಾಮ ಜನ್ಮಭೂಮಿ ಪ್ರದೇಶದಲ್ಲಿ ದೊರೆತ ವಸ್ತುಗಳು ಬೌದ್ಧ ಸಂಸ್ಕೃತಿಗೆ ಸೇರಿದ್ದು. ಹೀಗಾಗಿ ಅಲ್ಲಿ ಯುನೆಸ್ಕೊದಿಂದಲೇ ಉತ್ಖನನ ನಡೆಯಬೇಕು. ತಕ್ಷಣವೇ ರಾಮ ಮಂದಿರ ನಿರ್ಮಾಣ ಕಾರ್ಯಸ್ಥಗಿತಗೊಳಿಸಬೇಕು ಎಂದು ಬಿಕ್ಕುಗಳು ಆಗ್ರಹಿಸಿದ್ದಾರೆ.</p>.<p>ಅಯೋಧ್ಯೆಯೇ ಪುರಾತನ ಸಾಕೇತ ನಗರವಾಗಿದ್ದು, ಬೌದ್ಧ ಧರ್ಮದ ಕೇಂದ್ರವಾಗಿತ್ತು ಎಂಬುದು ಬೌದ್ಧ ಧರ್ಮದ ಅನುಯಾಯಿಗಳ ನಂಬಿಕೆಯಾಗಿದೆ.</p>.<p>‘ರಾಮ ಜನ್ಮಭೂಮಿಗೆ ಸಂಬಂಧಿಸಿದ ನಮ್ಮ ಜ್ಞಾಪಕ ಪತ್ರಗಳನ್ನು ಅಯೋಧ್ಯೆಯ ಆಡಳಿತದ ಮೂಲಕ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಕಳುಹಿಸಿದ್ದೇವೆ’ ಎಂದು ಆಜಾದ್ ಬೌದ್ಧ ಧರ್ಮ ಸೇನಾದ ಸದಸ್ಯರು ತಿಳಿಸಿದ್ದಾರೆ.</p>.<p>‘ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಇನ್ನು ಒಂದು ತಿಂಗಳ ಒಳಗೆ ಸ್ಥಗಿತಗೊಳಿಸಿ ಆ ಪ್ರದೇಶದ ಉತ್ಖನನಕ್ಕೆ ಯುನೆಸ್ಕೊಗೆ ಅವಕಾಶ ಮಾಡಿಕೊಡದಿದ್ದರೆ ನಾವು ಮತ್ತೆ ಹೋರಾಟ ಆರಂಭಿಸಲಿದ್ದೇವೆ’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>