<p><strong>ಜೈಪುರ</strong>: ನಡುರಸ್ತೆಯಲ್ಲಿ ಎರಡು ಗೂಳಿಗಳು ಪರಸ್ಪರ ಕಾಳಗ ನಡೆಸಿದ್ದು, ಈ ಪೈಕಿ ಒಂದು ಗೂಳಿಯು ನಿಲುಗಡೆ ಮಾಡಿದ್ದ ಸಾರಿಗೆ ಬಸ್ನೊಳಗೆ ನುಗ್ಗಿ ‘ದಾಂದಲೆ’ ನಡೆಸಿದ ಘಟನೆ ಜೈಪುರ ನಗರದ ಹರ್ಮದಾ ವಲಯದಲ್ಲಿ ನಡೆದಿದೆ.</p>.<p>ಗೂಳಿಯು ಏಕಾಏಕಿ ಬಸ್ಗೆ ನುಗ್ಗಿದ್ದೇ ಆತಂಕಗೊಂಡ ಪ್ರಯಾಣಿಕರು ತುರ್ತು ಬಾಗಿಲ ಮೂಲಕ ಹೊರಗೆ ಜಿಗಿದಿದ್ದಾರೆ. ನಿರ್ವಾಹಕ ಮತ್ತು ಚಾಲಕ ಇಬ್ಬರೂ ನಿರ್ಗಮಿಸುವ ಬಾಗಿಲಿನಿಂದಲೇ ಹೊರಗೆ ಜಿಗಿದಿದ್ದಾರೆ.</p>.<p>ಒಂದು ಗೂಳಿ ಬಸ್ನ ಒಳಗೆ ನುಗ್ಗಿದ್ದರೆ ಅದರ ಜೊತೆಗೆ ಕಾಳಗಕ್ಕಿಳಿದಿದ್ದ, ಕೋಪೋದ್ರಿಕ್ತವಾಗಿದ್ದ ಮತ್ತೊಂದು ಗೂಳಿ ಬಾಗಿಲಿಗೆ ಅಡ್ಡಲಾಗಿ ನಿಂತಿತ್ತು. ಒಳಗೆ ನುಗ್ಗಿದ್ದ ಗೂಳಿ ಸೀಟುಗಳನ್ನು ಜಖಂಗೊಳಿಸಿ, ಕಿಟಕಿ ಗಾಜುಗಳನ್ನು ಪುಡಿಗಟ್ಟಿತು. </p>.<p class="title">ಸುಮಾರು 30 ನಿಮಿಷ ಆತಂಕ, ಗೊಂದಲದ ಸನ್ನಿವೇಶ ಇತ್ತು. ಬಳಿಕ ಸಾರ್ವಜನಿಕರು ಗೂಳಿಯೊಂದನ್ನು ಓಡಿಸಿದ್ದು, ಬಸ್ನ ಒಳಗೆ ಹೊಕ್ಕಿದ್ದ ಮತ್ತೊಂದು ಹೊರಬರುವಂತೆ ಕ್ರಮವಹಿಸಿದರು.</p>.<p class="title">‘ಈ ಗೊಂದಲದಲ್ಲಿ ಯಾವುದೇ ಪ್ರಯಾಣಿಕರಿಗೆ ಪೆಟ್ಟಾಗಿಲ್ಲ’ ಎಂದು ಜೈಪುರ ನಗರ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ನಡುರಸ್ತೆಯಲ್ಲಿ ಎರಡು ಗೂಳಿಗಳು ಪರಸ್ಪರ ಕಾಳಗ ನಡೆಸಿದ್ದು, ಈ ಪೈಕಿ ಒಂದು ಗೂಳಿಯು ನಿಲುಗಡೆ ಮಾಡಿದ್ದ ಸಾರಿಗೆ ಬಸ್ನೊಳಗೆ ನುಗ್ಗಿ ‘ದಾಂದಲೆ’ ನಡೆಸಿದ ಘಟನೆ ಜೈಪುರ ನಗರದ ಹರ್ಮದಾ ವಲಯದಲ್ಲಿ ನಡೆದಿದೆ.</p>.<p>ಗೂಳಿಯು ಏಕಾಏಕಿ ಬಸ್ಗೆ ನುಗ್ಗಿದ್ದೇ ಆತಂಕಗೊಂಡ ಪ್ರಯಾಣಿಕರು ತುರ್ತು ಬಾಗಿಲ ಮೂಲಕ ಹೊರಗೆ ಜಿಗಿದಿದ್ದಾರೆ. ನಿರ್ವಾಹಕ ಮತ್ತು ಚಾಲಕ ಇಬ್ಬರೂ ನಿರ್ಗಮಿಸುವ ಬಾಗಿಲಿನಿಂದಲೇ ಹೊರಗೆ ಜಿಗಿದಿದ್ದಾರೆ.</p>.<p>ಒಂದು ಗೂಳಿ ಬಸ್ನ ಒಳಗೆ ನುಗ್ಗಿದ್ದರೆ ಅದರ ಜೊತೆಗೆ ಕಾಳಗಕ್ಕಿಳಿದಿದ್ದ, ಕೋಪೋದ್ರಿಕ್ತವಾಗಿದ್ದ ಮತ್ತೊಂದು ಗೂಳಿ ಬಾಗಿಲಿಗೆ ಅಡ್ಡಲಾಗಿ ನಿಂತಿತ್ತು. ಒಳಗೆ ನುಗ್ಗಿದ್ದ ಗೂಳಿ ಸೀಟುಗಳನ್ನು ಜಖಂಗೊಳಿಸಿ, ಕಿಟಕಿ ಗಾಜುಗಳನ್ನು ಪುಡಿಗಟ್ಟಿತು. </p>.<p class="title">ಸುಮಾರು 30 ನಿಮಿಷ ಆತಂಕ, ಗೊಂದಲದ ಸನ್ನಿವೇಶ ಇತ್ತು. ಬಳಿಕ ಸಾರ್ವಜನಿಕರು ಗೂಳಿಯೊಂದನ್ನು ಓಡಿಸಿದ್ದು, ಬಸ್ನ ಒಳಗೆ ಹೊಕ್ಕಿದ್ದ ಮತ್ತೊಂದು ಹೊರಬರುವಂತೆ ಕ್ರಮವಹಿಸಿದರು.</p>.<p class="title">‘ಈ ಗೊಂದಲದಲ್ಲಿ ಯಾವುದೇ ಪ್ರಯಾಣಿಕರಿಗೆ ಪೆಟ್ಟಾಗಿಲ್ಲ’ ಎಂದು ಜೈಪುರ ನಗರ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>