<p><strong>ನವದೆಹಲಿ</strong>: ಜಾತಿ ಜನಗಣತಿಯು ಸಮಾಜದಲ್ಲಿ ಬಿರುಕು ಹೆಚ್ಚಿಸಲಿದೆ ಎನ್ನುವ ದೂಷಣೆಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ಪ್ರತಿಕ್ರಿಯಿಸಿರುವ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ(ಎನ್ಸಿಎಸ್ಸಿ) ಅಧ್ಯಕ್ಷ ಕಿಶೋರ್ ಮಕವಾನ ಅವರು, ‘ಜಾತಿ ಗಣತಿಯು ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ’ ಎಂದಿದ್ದಾರೆ.</p><p>ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ‘ಗಣತಿ ವೇಳೆ ಸಂಗ್ರಹಿಸುವ ದತ್ತಾಂಶವು ನೀತಿ ನಿರೂಪಣೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಅಡಿಪಾಯವಾಗಲಿದೆ. ಅವಕಾಶ ವಂಚಿತ ಹಿಂದುಳಿದ ಜಾತಿ ಸಮುದಾಯಗಳನ್ನು ಮೇಲೆತ್ತಲು ಸಹಕಾರಿಯಾಗಲಿದೆ’ ಎಂದು ಹೇಳಿದರು.</p><p>ಮುಂದಿನ ಜನಗಣತಿ ವೇಳೆ ಜಾತಿ ಸಮೀಕ್ಷೆ ನಡೆಸುವ ಎನ್ಡಿಎ ಸರ್ಕಾರದ ನಿರ್ಧಾರ ಸ್ವಾಗತಿಸಿದ ಮಕವಾನ, ‘ನಿಖರ ಅಂಕಿ–ಅಂಶಗಳು ಸಿಕ್ಕಲ್ಲಿ ವಂಚಿತ ಸಮುದಾಯಕ್ಕೆ ಸರ್ಕಾರದ ಮುದ್ರಾ ಯೋಜನೆ ಸೇರಿ ಹಲವು ಕಲ್ಯಾಣ ಕಾರ್ಯಕ್ರಮಗಳ ಪ್ರಮಾಣಬದ್ಧ ಪಾಲು ಸಿಗಲಿದೆ’ ಎಂದರು. </p><p>1930ರ ನಂತರ ಮೊದಲ ಪ್ರಯತ್ನವಾಗಿ 2011ರಲ್ಲಿ ಯುಪಿಎ ಸರ್ಕಾರ ಸಾಮಾಜಿಕ–ಆರ್ಥಿಕ ಮತ್ತು ಜಾತಿ ಗಣತಿ ಮಾಡಿತ್ತು. ಆದರೆ ಜಾತಿ ದತ್ತಾಂಶ ಪೂರ್ಣವಾಗಿ ಬಿಡುಗಡೆ ಅಥವಾ ಬಳಕೆಯಾಗಲಿಲ್ಲ.</p><p>‘ಜಾತಿ ಜನಗಣತಿಯು ಒಳಪಂಗಡಗಳಲ್ಲಿ ಬಿರುಕು ಮೂಡಿಸುತ್ತದೆ ಎನ್ನುವುದು ಸರಿಯಲ್ಲ, ಬದಲಿಗೆ ಅಂಬೇಡ್ಕರ್ ಅವರು ಕನಸು ಕಂಡಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದ ಜಾತಿಗಳನ್ನು ಮೇಲೆತ್ತಿ ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತದೆ’ ಎಂದರು.</p><p>ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ನೇರವಾಗಿ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಭಾಗಿ ಆಗದಿದ್ದರೂ ಆನಂತರ ಸಂಖ್ಯೆಗೆ ಅನುಗುಣವಾಗಿ ಪಾಲು ನೀಡುವ ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.</p><p>‘ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಾಮಾಜಿಕ ಮತ್ತು ಆರ್ಥಿಕವಾಗಿ ಮೇಲೆತ್ತಬೇಕು’ ಎನ್ನುವ ಪ್ರಧಾನಿ ಮೋದಿ ಅವರ ಆಶಯಕ್ಕೆ ಜಾತಿಗಣತಿ ಪೂರಕವಾಗಿದೆ ಎಂದು ಮಕವಾನ ಹೇಳಿದರು.</p><p>1931ರ ನಂತರ ಅಂಕಿಅಂಶ ಪರಿಷ್ಕರಿಸಿಲ್ಲ. ಪರಿಶಿಷ್ಟ ಜಾತಿಯವರು ಜನಸಂಖ್ಯೆಯ ಶೇಕಡ 7ರಷ್ಟಿದ್ದಾರೆ ಎಂಬ ಅಂದಾಜು ಮಾಡಲಾಗುತ್ತಿದೆ. ಹಲವು ವಂಚಿತ ವರ್ಗಗಳು ಲೆಕ್ಕಕ್ಕೆ ಸಿಕ್ಕಿಲ್ಲ ಎಂದರು.</p><p>ಹೊಸ ಗಣತಿ ಕೇವಲ ಪರಿಶಿಷ್ಟ ಜಾತಿಗೆ ಸೀಮಿತವಲ್ಲ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಉಪ ಜಾತಿಗಳ ಸಮಗ್ರ ಅಂಕಿ–ಅಂಶ ಸಂಗ್ರಹಿಸಲಿದೆ ಎಂದರು.</p><p>ಜಾತಿ ಗಣತಿಗೆ ರಾಜಕೀಯ ಪಕ್ಷಗಳ ವಿರೋಧವನ್ನು ಖಂಡಿಸಿದ ಅವರು, 1951ರವರೆಗೆ ನಡೆದ ಗಣತಿಗಳಲ್ಲಿ ಜಾತಿ ಗಣತಿ ಸೇರಿಸದೇ ಇರುವುದು ಅವರ ಉದ್ದೇಶ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಜಾತಿ ಜನಗಣತಿಯು ಸಮಾಜದಲ್ಲಿ ಬಿರುಕು ಹೆಚ್ಚಿಸಲಿದೆ ಎನ್ನುವ ದೂಷಣೆಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ಪ್ರತಿಕ್ರಿಯಿಸಿರುವ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ(ಎನ್ಸಿಎಸ್ಸಿ) ಅಧ್ಯಕ್ಷ ಕಿಶೋರ್ ಮಕವಾನ ಅವರು, ‘ಜಾತಿ ಗಣತಿಯು ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ’ ಎಂದಿದ್ದಾರೆ.</p><p>ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ‘ಗಣತಿ ವೇಳೆ ಸಂಗ್ರಹಿಸುವ ದತ್ತಾಂಶವು ನೀತಿ ನಿರೂಪಣೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಅಡಿಪಾಯವಾಗಲಿದೆ. ಅವಕಾಶ ವಂಚಿತ ಹಿಂದುಳಿದ ಜಾತಿ ಸಮುದಾಯಗಳನ್ನು ಮೇಲೆತ್ತಲು ಸಹಕಾರಿಯಾಗಲಿದೆ’ ಎಂದು ಹೇಳಿದರು.</p><p>ಮುಂದಿನ ಜನಗಣತಿ ವೇಳೆ ಜಾತಿ ಸಮೀಕ್ಷೆ ನಡೆಸುವ ಎನ್ಡಿಎ ಸರ್ಕಾರದ ನಿರ್ಧಾರ ಸ್ವಾಗತಿಸಿದ ಮಕವಾನ, ‘ನಿಖರ ಅಂಕಿ–ಅಂಶಗಳು ಸಿಕ್ಕಲ್ಲಿ ವಂಚಿತ ಸಮುದಾಯಕ್ಕೆ ಸರ್ಕಾರದ ಮುದ್ರಾ ಯೋಜನೆ ಸೇರಿ ಹಲವು ಕಲ್ಯಾಣ ಕಾರ್ಯಕ್ರಮಗಳ ಪ್ರಮಾಣಬದ್ಧ ಪಾಲು ಸಿಗಲಿದೆ’ ಎಂದರು. </p><p>1930ರ ನಂತರ ಮೊದಲ ಪ್ರಯತ್ನವಾಗಿ 2011ರಲ್ಲಿ ಯುಪಿಎ ಸರ್ಕಾರ ಸಾಮಾಜಿಕ–ಆರ್ಥಿಕ ಮತ್ತು ಜಾತಿ ಗಣತಿ ಮಾಡಿತ್ತು. ಆದರೆ ಜಾತಿ ದತ್ತಾಂಶ ಪೂರ್ಣವಾಗಿ ಬಿಡುಗಡೆ ಅಥವಾ ಬಳಕೆಯಾಗಲಿಲ್ಲ.</p><p>‘ಜಾತಿ ಜನಗಣತಿಯು ಒಳಪಂಗಡಗಳಲ್ಲಿ ಬಿರುಕು ಮೂಡಿಸುತ್ತದೆ ಎನ್ನುವುದು ಸರಿಯಲ್ಲ, ಬದಲಿಗೆ ಅಂಬೇಡ್ಕರ್ ಅವರು ಕನಸು ಕಂಡಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದ ಜಾತಿಗಳನ್ನು ಮೇಲೆತ್ತಿ ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತದೆ’ ಎಂದರು.</p><p>ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ನೇರವಾಗಿ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಭಾಗಿ ಆಗದಿದ್ದರೂ ಆನಂತರ ಸಂಖ್ಯೆಗೆ ಅನುಗುಣವಾಗಿ ಪಾಲು ನೀಡುವ ನೀತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.</p><p>‘ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಾಮಾಜಿಕ ಮತ್ತು ಆರ್ಥಿಕವಾಗಿ ಮೇಲೆತ್ತಬೇಕು’ ಎನ್ನುವ ಪ್ರಧಾನಿ ಮೋದಿ ಅವರ ಆಶಯಕ್ಕೆ ಜಾತಿಗಣತಿ ಪೂರಕವಾಗಿದೆ ಎಂದು ಮಕವಾನ ಹೇಳಿದರು.</p><p>1931ರ ನಂತರ ಅಂಕಿಅಂಶ ಪರಿಷ್ಕರಿಸಿಲ್ಲ. ಪರಿಶಿಷ್ಟ ಜಾತಿಯವರು ಜನಸಂಖ್ಯೆಯ ಶೇಕಡ 7ರಷ್ಟಿದ್ದಾರೆ ಎಂಬ ಅಂದಾಜು ಮಾಡಲಾಗುತ್ತಿದೆ. ಹಲವು ವಂಚಿತ ವರ್ಗಗಳು ಲೆಕ್ಕಕ್ಕೆ ಸಿಕ್ಕಿಲ್ಲ ಎಂದರು.</p><p>ಹೊಸ ಗಣತಿ ಕೇವಲ ಪರಿಶಿಷ್ಟ ಜಾತಿಗೆ ಸೀಮಿತವಲ್ಲ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಉಪ ಜಾತಿಗಳ ಸಮಗ್ರ ಅಂಕಿ–ಅಂಶ ಸಂಗ್ರಹಿಸಲಿದೆ ಎಂದರು.</p><p>ಜಾತಿ ಗಣತಿಗೆ ರಾಜಕೀಯ ಪಕ್ಷಗಳ ವಿರೋಧವನ್ನು ಖಂಡಿಸಿದ ಅವರು, 1951ರವರೆಗೆ ನಡೆದ ಗಣತಿಗಳಲ್ಲಿ ಜಾತಿ ಗಣತಿ ಸೇರಿಸದೇ ಇರುವುದು ಅವರ ಉದ್ದೇಶ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>