ಕೊಯಮತ್ತೂರು: 2017ರಲ್ಲಿ ನಡೆದ ಜಲ್ಲಿಕಟ್ಟು ಹಿಂಸಾಚಾರಕ್ಕೆ ಸಂಬಂಧಿಸಿದ ಅಂತಿಮ ತನಿಖಾ ವರದಿಯನ್ನು ಇನ್ನು ಆರೇಳು ತಿಂಗಳಲ್ಲಿ ಸಲ್ಲಿಸಲಾಗುತ್ತದೆ ಎಂದು ತನಿಖೆ ನಡೆಸುತ್ತಿರುವ ಏಕವ್ಯಕ್ತಿ ಆಯೋಗದ ನಿವೃತ್ತ ನ್ಯಾಯಮೂರ್ತಿ ಎಸ್.ರಾಜಶೇಖರನ್ ತಿಳಿಸಿದ್ದಾರೆ.
ತನಿಖೆಯ ಕೊನೆ ಹಂತದಲ್ಲಿ ಮುಂದಿನ ತಿಂಗಳು 1,956 ಸಾಕ್ಷಿಗಳಿಂದ ಮದುರೆಯಲ್ಲಿ ಹೇಳಿಕೆ ಪಡೆಯಲಾಗುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.