ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಸ್‌ ಬ್ಯಾಂಕ್‌ ಹಗರಣ | ವಧವಾನ್‌ ಸಹೋದರರ ಬಂಧನ ವಿಸ್ತರಣೆ

Last Updated 8 ಮೇ 2020, 20:32 IST
ಅಕ್ಷರ ಗಾತ್ರ

ಮುಂಬೈ: ಯೆಸ್‌ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದಂತೆ ಸಹೋದರರಾದ ಕಪಿಲ್‌ ವಧವಾನ್‌ ಮತ್ತು ಧೀರಜ್‌ ವಧವಾನ್‌ ಅವರ ಬಂಧನದ ಅವಧಿಯನ್ನು ಮೇ 10ರವರೆಗೆ ವಿಸ್ತರಿಸಲಾಗಿದೆ.

ಡಿಎಚ್ಎಫ್‌ಎಲ್‌ ಪ್ರವರ್ತಕರಾದ ಕಪಿಲ್‌ ವಧವಾನ್‌ ಮತ್ತು ಆರ್‌ಕೆಡಬ್ಲೂ ಡೆವಲಪರ್‌ನ ಪ್ರವರ್ತಕರಾದ ಧೀರಜ್‌ ವಧವಾನ್‌ ಅವರನ್ನು ಕಳೆದ ತಿಂಗಳು ಮಹಾಬಳೇಶ್ವರದಲ್ಲಿ ಬಂಧಿಸಲಾಗಿತ್ತು.

ವಧವಾನ್‌ ಸಹೋದರರ ಜತೆ ಕ್ರಿಮಿನಲ್‌ ಸಂಚು ರೂಪಿಸಿದ್ದ ಯೆಸ್‌ ಬ್ಯಾಂಕ್‌ ಸಿಇಒ ರಾಣಾ ಕಪೂರ್‌, ಡಿಎಚ್ಎಫ್‌ಎಲ್‌ಗೆ ಹಣಕಾಸಿನ ನೆರವು ನೀಡಿದ್ದರು.

ಈ ಯೋಜನೆ ಅನ್ವಯ 2018ರ ಏಪ್ರಿಲ್‌ ಮತ್ತು ಜೂನ್‌ ನಡುವೆ ಯೆಸ್‌ ಬ್ಯಾಂಕ್‌ ಡಿಎಚ್‌ಎಫ್‌ಎಲ್‌ನಲ್ಲಿ ₹3700 ಕೋಟಿ ಹೂಡಿಕೆ ಮಾಡಿತ್ತು. ಇದಕ್ಕಾಗಿ, ವಧವಾನ್‌ ಸಹೋದರರು, ಕಪೂರ್‌ ಮತ್ತು ಅವರ ಕುಟುಂಬದ ಸದಸ್ಯರಿಗೆ ವಿವಿಧ ರೂಪದಲ್ಲಿ ₹600 ಕೋಟಿ ಲಂಚ ನೀಡಿದ್ದರು ಎಂದು ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT