<p><strong>ಜೈಪುರ</strong>: ‘ವಿಚಾರಣೆಯ ಮೂಲಕ ಅಪರಾಧಿ ಎಂದು ಸಾಬೀತಾಗುವವರೆಗೂ ಆರೋಪಿಗಳು ನಿರಪರಾಧಿಯಾಗಿರುತ್ತಾರೆ ಮತ್ತು ಅವರು ಜಾಮೀನಿಗೆ ಅರ್ಹರಾಗಿರುತ್ತಾರೆ’ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಭಾನುವಾರ ತಿಳಿಸಿದರು.</p>.<p>ಜೈಪುರ ಸಾಹಿತ್ಯ ಉತ್ಸವ 2026ರ ‘ನ್ಯಾಯ ಎಂದರೇನು?’ ಎನ್ನುವ ಗೋಷ್ಠಿಯಲ್ಲಿ ವೀರ್ ಸಾಂಘ್ವಿ ಅವರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದ ಚಂದ್ರಚೂಡ್ ಅವರು, ದೆಹಲಿ ಗಲಭೆ ಸಂಚು ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿದರು.</p>.<p>‘ಒಬ್ಬ ವ್ಯಕ್ತಿ 5 ವರ್ಷ ಇಲ್ಲವೇ 7 ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲು ಶಿಕ್ಷೆ ಅನುಭವಿಸಿ, ನಂತರ ನಿರ್ದೋಷಿ ಎಂದು ಬಿಡುಗಡೆಯಾದರೆ ಅವರಿಗಾದ ಕಾಲದ ನಷ್ಟವನ್ನು ಹೇಗೆ ತುಂಬಿಕೊಡುವುದು’ ಎಂದರು.</p>.<p>‘ಸರಣಿ ಅತ್ಯಾಚಾರ, ಕೊಲೆ ಎಸಗಿದ, ದೇಶ ತೊರೆಯುವ ಸಾಧ್ಯತೆ ಇರುವ, ವಿಚಾರಣೆಯ ಹಂತದಲ್ಲಿ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುವ ಆರೋಪಿಗಳಿಗೆ ಜಾಮೀನು ನಿರಾಕರಿಸಬಹುದು. ಇವುಗಳ ಹೊರತಾಗಿ ಉಳಿದ ಆರೋಪಿಗಳು ಜಾಮೀನಿಗೆ ಅರ್ಹರು’ ಎಂದು ಚಂದ್ರಚೂಡ್ ಅವರು ವಿವರಿಸಿದರು.</p>.<p>‘ಸಂವಿಧಾನದ ನಿಯಮಗಳು ಪರಮೋಚ್ಚವಾಗಿದ್ದು, ಸರ್ಕಾರದ ನಿಯಮಗಳು ಸಂವಿಧಾನದ ಅಡಿಯಲ್ಲಿ ಬರುತ್ತವೆ. ಜನರ ಬದುಕುವ ಹಕ್ಕು ತ್ವರಿತ ವಿಚಾರಣೆಯ ಹಕ್ಕನ್ನೂ ಒಳಗೊಂಡಿದೆ. ತ್ವರಿತ ವಿಚಾರಣೆ ಸಾಧ್ಯವಾಗದಿದ್ದಾಗ ಜಾಮೀನು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>ಭಾರತದ ಮುಖ್ಯನ್ಯಾಯಮೂರ್ತಿಯಾಗಿ ತಮ್ಮ 24 ತಿಂಗಳ ಅವಧಿಯಲ್ಲಿ 21 ಸಾವಿರ ಜಾಮೀನು ಅರ್ಜಿಗಳನ್ನು ಇತ್ಯರ್ಥಪಡಿಸಿದ್ದಾಗಿ ತಿಳಿಸಿದ ಅವರು, ಪವನ್ ಖೇಡ ಮತ್ತು ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ವಿವರಿಸಿದರು.</p>.<p>ನ್ಯಾಯಾಲಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಮಾಜದ ಭಾಗವಾದ ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ಇರುವುದು ನಿಜ. ಆದರೆ, ಅದನ್ನು ಅತಿರಂಜಿಸಿ ಹೇಳಲಾಗುತ್ತಿದೆ’ ಎಂದ ಅವರು, ‘ಸರ್ಕಾರವು ಈ ದಿಸೆಯಲ್ಲಿ ವಾಗ್ಧಂಡನೆಯ ನಿಯಮಗಳನ್ನು ಬದಲಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಕೊಲಿಜಿಯಂ ಮೂರು ವರ್ಷಗಳ ಅವಧಿ ಹೊಂದಿರಬೇಕು. ಈ ವ್ಯವಸ್ಥೆಯಲ್ಲಿ ಸರ್ಕಾರಗಳು ಹಿಡಿತ ಸಾಧಿಸಲು ಅವಕಾಶ ಇರಬಾರದು’ ಎಂದು ಅಭಿಪ್ರಾಯಪಟ್ಟರು.</p>.<p>ವೈವಾಹಿಕ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರುವ ಬಗ್ಗೆ ತಮ್ಮ ಅವಧಿಯಲ್ಲಿ ತೀರ್ಪು ನೀಡಲು ಸಾಧ್ಯವಾಗದೇ ಇರುವುದು ಪಶ್ಚಾತ್ತಾಪದ ವಿಚಾರ. ಇದರಲ್ಲಿ ಕಾನೂನು ಬದಲಾಗಬೇಕಿದೆ. ಸುಪ್ರೀಂ ಕೋರ್ಟ್ ಅನ್ನು ಜನರ ಕೋರ್ಟ್ ಆಗಿ ಮಾಡಿದ್ದೆ. ಈ ಬಗ್ಗೆ ತೃಪ್ತಿ ಇದೆ ಎಂದು ಡಿ.ವೈ.ಚಂದ್ರಚೂಡ್ ಹೇಳಿದರು. </p>.<div><blockquote>ಸರ್ಕಾರಗಳು ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಮುಂದಿಟ್ಟಾಗ ನ್ಯಾಯಾಲಯ ಏನೂ ಮಾಡಲಾಗುವುದಿಲ್ಲ </blockquote><span class="attribution">ಡಿ.ವೈ.ಚಂದ್ರಚೂಡ್ ನಿವೃತ್ತ ಸಿಜೆಐ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ‘ವಿಚಾರಣೆಯ ಮೂಲಕ ಅಪರಾಧಿ ಎಂದು ಸಾಬೀತಾಗುವವರೆಗೂ ಆರೋಪಿಗಳು ನಿರಪರಾಧಿಯಾಗಿರುತ್ತಾರೆ ಮತ್ತು ಅವರು ಜಾಮೀನಿಗೆ ಅರ್ಹರಾಗಿರುತ್ತಾರೆ’ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಭಾನುವಾರ ತಿಳಿಸಿದರು.</p>.<p>ಜೈಪುರ ಸಾಹಿತ್ಯ ಉತ್ಸವ 2026ರ ‘ನ್ಯಾಯ ಎಂದರೇನು?’ ಎನ್ನುವ ಗೋಷ್ಠಿಯಲ್ಲಿ ವೀರ್ ಸಾಂಘ್ವಿ ಅವರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದ ಚಂದ್ರಚೂಡ್ ಅವರು, ದೆಹಲಿ ಗಲಭೆ ಸಂಚು ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿದರು.</p>.<p>‘ಒಬ್ಬ ವ್ಯಕ್ತಿ 5 ವರ್ಷ ಇಲ್ಲವೇ 7 ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲು ಶಿಕ್ಷೆ ಅನುಭವಿಸಿ, ನಂತರ ನಿರ್ದೋಷಿ ಎಂದು ಬಿಡುಗಡೆಯಾದರೆ ಅವರಿಗಾದ ಕಾಲದ ನಷ್ಟವನ್ನು ಹೇಗೆ ತುಂಬಿಕೊಡುವುದು’ ಎಂದರು.</p>.<p>‘ಸರಣಿ ಅತ್ಯಾಚಾರ, ಕೊಲೆ ಎಸಗಿದ, ದೇಶ ತೊರೆಯುವ ಸಾಧ್ಯತೆ ಇರುವ, ವಿಚಾರಣೆಯ ಹಂತದಲ್ಲಿ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುವ ಆರೋಪಿಗಳಿಗೆ ಜಾಮೀನು ನಿರಾಕರಿಸಬಹುದು. ಇವುಗಳ ಹೊರತಾಗಿ ಉಳಿದ ಆರೋಪಿಗಳು ಜಾಮೀನಿಗೆ ಅರ್ಹರು’ ಎಂದು ಚಂದ್ರಚೂಡ್ ಅವರು ವಿವರಿಸಿದರು.</p>.<p>‘ಸಂವಿಧಾನದ ನಿಯಮಗಳು ಪರಮೋಚ್ಚವಾಗಿದ್ದು, ಸರ್ಕಾರದ ನಿಯಮಗಳು ಸಂವಿಧಾನದ ಅಡಿಯಲ್ಲಿ ಬರುತ್ತವೆ. ಜನರ ಬದುಕುವ ಹಕ್ಕು ತ್ವರಿತ ವಿಚಾರಣೆಯ ಹಕ್ಕನ್ನೂ ಒಳಗೊಂಡಿದೆ. ತ್ವರಿತ ವಿಚಾರಣೆ ಸಾಧ್ಯವಾಗದಿದ್ದಾಗ ಜಾಮೀನು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>ಭಾರತದ ಮುಖ್ಯನ್ಯಾಯಮೂರ್ತಿಯಾಗಿ ತಮ್ಮ 24 ತಿಂಗಳ ಅವಧಿಯಲ್ಲಿ 21 ಸಾವಿರ ಜಾಮೀನು ಅರ್ಜಿಗಳನ್ನು ಇತ್ಯರ್ಥಪಡಿಸಿದ್ದಾಗಿ ತಿಳಿಸಿದ ಅವರು, ಪವನ್ ಖೇಡ ಮತ್ತು ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ವಿವರಿಸಿದರು.</p>.<p>ನ್ಯಾಯಾಲಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಮಾಜದ ಭಾಗವಾದ ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ಇರುವುದು ನಿಜ. ಆದರೆ, ಅದನ್ನು ಅತಿರಂಜಿಸಿ ಹೇಳಲಾಗುತ್ತಿದೆ’ ಎಂದ ಅವರು, ‘ಸರ್ಕಾರವು ಈ ದಿಸೆಯಲ್ಲಿ ವಾಗ್ಧಂಡನೆಯ ನಿಯಮಗಳನ್ನು ಬದಲಿಸಬೇಕು’ ಎಂದು ಸಲಹೆ ನೀಡಿದರು.</p>.<p>‘ಕೊಲಿಜಿಯಂ ಮೂರು ವರ್ಷಗಳ ಅವಧಿ ಹೊಂದಿರಬೇಕು. ಈ ವ್ಯವಸ್ಥೆಯಲ್ಲಿ ಸರ್ಕಾರಗಳು ಹಿಡಿತ ಸಾಧಿಸಲು ಅವಕಾಶ ಇರಬಾರದು’ ಎಂದು ಅಭಿಪ್ರಾಯಪಟ್ಟರು.</p>.<p>ವೈವಾಹಿಕ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರುವ ಬಗ್ಗೆ ತಮ್ಮ ಅವಧಿಯಲ್ಲಿ ತೀರ್ಪು ನೀಡಲು ಸಾಧ್ಯವಾಗದೇ ಇರುವುದು ಪಶ್ಚಾತ್ತಾಪದ ವಿಚಾರ. ಇದರಲ್ಲಿ ಕಾನೂನು ಬದಲಾಗಬೇಕಿದೆ. ಸುಪ್ರೀಂ ಕೋರ್ಟ್ ಅನ್ನು ಜನರ ಕೋರ್ಟ್ ಆಗಿ ಮಾಡಿದ್ದೆ. ಈ ಬಗ್ಗೆ ತೃಪ್ತಿ ಇದೆ ಎಂದು ಡಿ.ವೈ.ಚಂದ್ರಚೂಡ್ ಹೇಳಿದರು. </p>.<div><blockquote>ಸರ್ಕಾರಗಳು ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಮುಂದಿಟ್ಟಾಗ ನ್ಯಾಯಾಲಯ ಏನೂ ಮಾಡಲಾಗುವುದಿಲ್ಲ </blockquote><span class="attribution">ಡಿ.ವೈ.ಚಂದ್ರಚೂಡ್ ನಿವೃತ್ತ ಸಿಜೆಐ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>