<p><strong>ಪಿಲಿಭಿತ್ (ಉತ್ತರ ಪ್ರದೇಶ)</strong>: ಇಲ್ಲಿನ ಜಹಾನಾಬಾದ್ ಪ್ರದೇಶದ ಮಸೀದಿಯಲ್ಲಿ ಅನುಮತಿ ಪಡೆಯದೆ, ಧ್ವನಿವರ್ಧಕ ಬಳಸಿದ ಆರೋಪದ ಮೇಲೆ ಮೌಲ್ವಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>.<p>‘ಕಾಜಿಟೊಲಾದ ಮಸೀದಿಯಲ್ಲಿ ಮಾ. 1ರಂದು ‘ನಮಾಜ್’ ವೇಳೆ ಧ್ವನಿವರ್ಧಕ ಬಳಸಿ ‘ಆಜಾನ್’ ಕೂಗಿದ ಆರೋಪದ ಮೇಲೆ ಮೌಲ್ವಿ ಅಶ್ಫಕ್ ವಿರುದ್ಧ ಸಬ್ ಇನ್ಸ್ಪೆಕ್ಟರ್ ವರುಣ್ ಎಫ್ಐಆರ್ ದಾಖಲಿಸಿದ್ದಾರೆ’ ಎಂದು ಜಹಾನಾಬಾದ್ ಠಾಣಾಧಿಕಾರಿ ಮನೋಜ್ಕುಮಾರ್ ಮಿಶ್ರಾ ತಿಳಿಸಿದ್ದಾರೆ. </p>.<p>‘ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ, ಧ್ವನಿವರ್ಧಕ ಬಳಸುವಂತಿಲ್ಲ. ಫೆ.28ರ ರಾತ್ರಿ ವೇಳೆ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ‘ನಮಾಜ್’ ಹಾಗೂ ‘ಆಜಾನ್’ ಕೂಗಿದ್ದರು. ಈ ವೇಳೆ ವಿಚಾರಿಸಿದಾಗ ಮೌಲ್ವಿ ಅವರು ಯಾವುದೇ ಅನುಮತಿ ಪತ್ರ ನೀಡಿರಲಿಲ್ಲ. ಎಚ್ಚರಿಸಿದ ನಂತರವೂ ಧ್ವನಿವರ್ಧಕ ಬಳಸಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.</p>.<p class="title">‘ರಾಜ್ಯದಾದ್ಯಂತ ಈಗ 10 ಹಾಗೂ 12ನೇ ತರಗತಿ ಪರೀಕ್ಷೆ ನಡೆಯುತ್ತಿದ್ದು, ಧ್ವನಿವರ್ಧಕ ಬಳಸುವುದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ತೊಂದರೆಯಾಗುತ್ತದೆ’ ಎಂದು ಮಿಶ್ರಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿಲಿಭಿತ್ (ಉತ್ತರ ಪ್ರದೇಶ)</strong>: ಇಲ್ಲಿನ ಜಹಾನಾಬಾದ್ ಪ್ರದೇಶದ ಮಸೀದಿಯಲ್ಲಿ ಅನುಮತಿ ಪಡೆಯದೆ, ಧ್ವನಿವರ್ಧಕ ಬಳಸಿದ ಆರೋಪದ ಮೇಲೆ ಮೌಲ್ವಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>.<p>‘ಕಾಜಿಟೊಲಾದ ಮಸೀದಿಯಲ್ಲಿ ಮಾ. 1ರಂದು ‘ನಮಾಜ್’ ವೇಳೆ ಧ್ವನಿವರ್ಧಕ ಬಳಸಿ ‘ಆಜಾನ್’ ಕೂಗಿದ ಆರೋಪದ ಮೇಲೆ ಮೌಲ್ವಿ ಅಶ್ಫಕ್ ವಿರುದ್ಧ ಸಬ್ ಇನ್ಸ್ಪೆಕ್ಟರ್ ವರುಣ್ ಎಫ್ಐಆರ್ ದಾಖಲಿಸಿದ್ದಾರೆ’ ಎಂದು ಜಹಾನಾಬಾದ್ ಠಾಣಾಧಿಕಾರಿ ಮನೋಜ್ಕುಮಾರ್ ಮಿಶ್ರಾ ತಿಳಿಸಿದ್ದಾರೆ. </p>.<p>‘ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ, ಧ್ವನಿವರ್ಧಕ ಬಳಸುವಂತಿಲ್ಲ. ಫೆ.28ರ ರಾತ್ರಿ ವೇಳೆ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ‘ನಮಾಜ್’ ಹಾಗೂ ‘ಆಜಾನ್’ ಕೂಗಿದ್ದರು. ಈ ವೇಳೆ ವಿಚಾರಿಸಿದಾಗ ಮೌಲ್ವಿ ಅವರು ಯಾವುದೇ ಅನುಮತಿ ಪತ್ರ ನೀಡಿರಲಿಲ್ಲ. ಎಚ್ಚರಿಸಿದ ನಂತರವೂ ಧ್ವನಿವರ್ಧಕ ಬಳಸಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.</p>.<p class="title">‘ರಾಜ್ಯದಾದ್ಯಂತ ಈಗ 10 ಹಾಗೂ 12ನೇ ತರಗತಿ ಪರೀಕ್ಷೆ ನಡೆಯುತ್ತಿದ್ದು, ಧ್ವನಿವರ್ಧಕ ಬಳಸುವುದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ತೊಂದರೆಯಾಗುತ್ತದೆ’ ಎಂದು ಮಿಶ್ರಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>