ಮಾಧ್ಯಮ ವರದಿ ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , 2021–22ರಲ್ಲಿ 3.9 ಕೋಟಿ ಗ್ರಾಹಕರಿಗೆ ಮರುಭರ್ತಿ ಸಿಲಿಂಡರ್ ಪಡೆಯಲು ಸಾಧ್ಯವಾಗಿಲ್ಲ. 2016ರಲ್ಲಿ ಚಾಲನೆ ನೀಡಿದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಕಳೆದ ವರ್ಷ ಆ.10 ರಂದು ಬಿಡುಗಡೆಗೊಂಡ ಉಜ್ವಲ್ 2 ಯೋಜನೆಗೆ ತೆರಿಗೆದಾರರ ಹಣವನ್ನು ಜಾಹೀರಾತಿಗಾಗಿ ಮತ್ತೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.