ಚಾಂಡ್ಲಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭವ್ಯವಾದ ರಾಮಮಂದಿರ ದೇವಾಲಯ ಈಗ ನಿರ್ಮಾಣಗೊಂಡಿದೆ. ಆದರೆ, ಇದನ್ನು 1947ರಲ್ಲಿಯೇ ನಿರ್ಮಾಣ ಮಾಡಬಹುದಿತ್ತು’ ಎಂದು ತಿಳಿಸಿದ್ದಾರೆ.
ಜನವರಿ 22ರಂದು ನಡೆದ ಬಾಲ ರಾಮ ಪ್ರಾಣಪ್ರತಿಷ್ಠಾಪನೆಯ ಆಹ್ವಾನವನ್ನು ನಿರಾಕರಿಸುವ ಮೂಲಕ ಕಾಂಗ್ರೆಸ್ ದೇವರಿಗೆ ಅಗೌರವ ತೋರಿದೆ. ಇಂತಹ ಕೃತ್ಯ ಎಸಗಿದವರಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಯಾದವ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಭಾರತದ ಸಂಸ್ಕೃತಿಯ ಪತಾಕೆ ಎತ್ತರದಲ್ಲಿ ಹಾರುತ್ತಿದೆ. ಮೋದಿಯವರ ಜನಪ್ರಿಯತೆ ಎಷ್ಟಿದೆ ಅಂದರೆ, ಪಾಕ್ ಆಕ್ರಮಿತ ಕಾಶ್ಮೀರದ ಜನರು ಕೂಡ ಪ್ರಧಾನಿ ಅವರನ್ನು ಇಷ್ಟಪಡಲಾರಂಭಿಸಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.