‘ಈ ಬಗ್ಗೆ ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದೆವು. ಆದರೆ ನಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗಲಿಲ್ಲ. ನಮಗೆ ಕನ್ಹಯ್ಯ ಕುಮಾರ್ ಇಷ್ಟ ಇಲ್ಲ. ಹೀಗಾಗಿ ನಾವು ಬೀದಿಗೆ ಇಳಿದಿದ್ದೇವೆ’ ಎಂದು ಮತ್ತೊಬ್ಬ ಪ್ರತಿಭಟನಾಕಾರರು ಹೇಳಿದರು.
‘ಹೊರಗಿನವರಿಗೆ ಏನೂ ತಿಳಿದಿಲ್ಲ. ಅವರಿಗೆ ನಮ್ಮ ಬೀದಿಯ ಬಗ್ಗೆಯೂ ಮಾಹಿತಿ ಇಲ್ಲ. ಅವರಿಗೆ ಯಾಕೆ ಟಿಕೆಟ್ ಕೊಡಬೇಕು? ನಾವು ಯಾರ ವಿರುದ್ಧವೂ ಅಲ್ಲ. ಇಲ್ಲಿನ ರಸ್ತೆಗಳ ಪರಿಚಯ ಇರುವ, ಸಮಸ್ಯೆಗಳ ಬಗ್ಗೆ ಅರಿವಿರುವ ವ್ಯಕ್ತಿ ನಮಗೆ ಬೇಕು. ಅರವಿಂದರ್ ಸಿಂಗ್ ಲೌಲಿ, ಸಂದೀಪ್ ದೀಕ್ಷಿತ್ ಮುಂತಾದವರಿಗೆ ಟಿಕೆಟ್ ನೀಡಬಹುದಿತ್ತು’ ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.