<p><strong>ಶಿಲ್ಲಾಂಗ್</strong> : ಈಶಾನ್ಯ ರಾಜ್ಯಗಳಲ್ಲಿ ನಡೆದಿರುವ ಭಾರತ್ ಜೋಡೋ ನ್ಯಾಯಯಾತ್ರೆಯು ಸುದ್ದಿಯ ಕೇಂದ್ರಬಿಂದುವಾಗಿದೆಯೇ ಹೊರತು ಮತಗಳನ್ನು ಸೆಳೆಯಲಾಗದು ಎಂದು ಮೇಘಾಲಯ ಮುಖ್ಯಮಂತ್ರಿ ಕೋನ್ರಡ್ ಸಂಗ್ಮಾ ಟೀಕಿಸಿದ್ದಾರೆ.</p>.<p>ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಯಾತ್ರೆ ನಡೆಸಲು ಕಾಂಗ್ರೆಸ್ ವ್ಯಯಿಸಿದ ಶಕ್ತಿ ಮತ್ತು ಸಂಪನ್ಮೂಲಗಳು ಚುನಾವಣೆಯಲ್ಲಿ ಮತ ಮತ್ತು ಸ್ಥಾನಗಳಾಗಿ ಬದಲಾಗುವುದಿಲ್ಲ. ಅವರಿಗೆ ಸರಿಯಾದ ಪ್ರತಿಫಲ ಸಿಗುವುದಿಲ್ಲ’ ಎಂದರು.</p>.<p>‘ಕಾಂಗ್ರೆಸ್ನಲ್ಲಿ ಹಲವಾರು ಆಂತರಿಕ ಮತ್ತು ಸಂಘಟನಾತ್ಮಕ ಸಮಸ್ಯೆಗಳಿವೆ. ಯಾತ್ರೆ ನಡೆಯುತ್ತಿದ್ದಂತೆ ಹಲವರು ಪಕ್ಷವನ್ನು ತೊರೆಯುತ್ತಿದ್ದಾರೆ. ಅವರು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕಿದೆ’ ಎಂದರು.</p>.<p>ಮೇಘಾಲಯದ ಕೆಲ ಪ್ರದೇಶಗಳಿಗೆ ಸಿಎಎಯಿಂದ ವಿನಾಯಿತಿ</p>.<p>ಮೇಘಾಲಯದ ಕೆಲ ಪ್ರದೇಶಗಳಿಗೆ ಪೌರತ್ವ ಕಾಯ್ದೆ(ಸಿಎಎ)ಯಡಿ ವಿನಾಯಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕೋನ್ರಾಡ್ ಸಂಗ್ಮಾ ತಿಳಿಸಿದ್ದಾರೆ.</p>.<p>‘ವಲಸಿಗರನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಗಡಿ ಪರವಣಿಗೆ(ಐಎಲ್ಪಿ)ಯನ್ನು ವಿಸ್ತರಣೆ ಮಾಡುವಂತೆ ಅಥವಾ ಬೇರೆ ನಿಯಮಗಳನ್ನು ಜಾರಿಗೊಳಿಸುವಂತೆ ನಾವು ಕೇಂದ್ರಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದರು.</p>.<p>‘ಸಿಎಎ ಮೊದಲ ಕರಡುಪ್ರತಿಯಲ್ಲಿ ಯಾವುದೇ ರಾಜ್ಯಗಳಿಗೆ ವಿನಾಯಿತಿ ನೀಡಿರಲಿಲ್ಲ. ಬಳಿಕ ನಾವು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು, ಈ ಹಿನ್ನೆಲೆ ಮೇಘಾಲಯ ಸೇರಿದಂತೆ 6ನೇ ವಿಧಿಯಡಿ ಮತ್ತು ಐಎಲ್ಪಿ ಬರುವ ಪ್ರದೇಶಗಳಿಗೆ ಸಿಎಎಯಿಂದ ವಿನಾಯಿತಿ ನೀಡಲಾಗಿದೆ. 6ನೇ ವಿಧಿಯಡಿ ಬರದ ಪ್ರದೇಶಕ್ಕೂ ವಿನಾಯಿತಿ ನೀಡಬೇಕೆಂಬುವುದು ನಮ್ಮ ಕೋರಿಕೆಯಾಗಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಲ್ಲಾಂಗ್</strong> : ಈಶಾನ್ಯ ರಾಜ್ಯಗಳಲ್ಲಿ ನಡೆದಿರುವ ಭಾರತ್ ಜೋಡೋ ನ್ಯಾಯಯಾತ್ರೆಯು ಸುದ್ದಿಯ ಕೇಂದ್ರಬಿಂದುವಾಗಿದೆಯೇ ಹೊರತು ಮತಗಳನ್ನು ಸೆಳೆಯಲಾಗದು ಎಂದು ಮೇಘಾಲಯ ಮುಖ್ಯಮಂತ್ರಿ ಕೋನ್ರಡ್ ಸಂಗ್ಮಾ ಟೀಕಿಸಿದ್ದಾರೆ.</p>.<p>ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಯಾತ್ರೆ ನಡೆಸಲು ಕಾಂಗ್ರೆಸ್ ವ್ಯಯಿಸಿದ ಶಕ್ತಿ ಮತ್ತು ಸಂಪನ್ಮೂಲಗಳು ಚುನಾವಣೆಯಲ್ಲಿ ಮತ ಮತ್ತು ಸ್ಥಾನಗಳಾಗಿ ಬದಲಾಗುವುದಿಲ್ಲ. ಅವರಿಗೆ ಸರಿಯಾದ ಪ್ರತಿಫಲ ಸಿಗುವುದಿಲ್ಲ’ ಎಂದರು.</p>.<p>‘ಕಾಂಗ್ರೆಸ್ನಲ್ಲಿ ಹಲವಾರು ಆಂತರಿಕ ಮತ್ತು ಸಂಘಟನಾತ್ಮಕ ಸಮಸ್ಯೆಗಳಿವೆ. ಯಾತ್ರೆ ನಡೆಯುತ್ತಿದ್ದಂತೆ ಹಲವರು ಪಕ್ಷವನ್ನು ತೊರೆಯುತ್ತಿದ್ದಾರೆ. ಅವರು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕಿದೆ’ ಎಂದರು.</p>.<p>ಮೇಘಾಲಯದ ಕೆಲ ಪ್ರದೇಶಗಳಿಗೆ ಸಿಎಎಯಿಂದ ವಿನಾಯಿತಿ</p>.<p>ಮೇಘಾಲಯದ ಕೆಲ ಪ್ರದೇಶಗಳಿಗೆ ಪೌರತ್ವ ಕಾಯ್ದೆ(ಸಿಎಎ)ಯಡಿ ವಿನಾಯಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕೋನ್ರಾಡ್ ಸಂಗ್ಮಾ ತಿಳಿಸಿದ್ದಾರೆ.</p>.<p>‘ವಲಸಿಗರನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಗಡಿ ಪರವಣಿಗೆ(ಐಎಲ್ಪಿ)ಯನ್ನು ವಿಸ್ತರಣೆ ಮಾಡುವಂತೆ ಅಥವಾ ಬೇರೆ ನಿಯಮಗಳನ್ನು ಜಾರಿಗೊಳಿಸುವಂತೆ ನಾವು ಕೇಂದ್ರಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದರು.</p>.<p>‘ಸಿಎಎ ಮೊದಲ ಕರಡುಪ್ರತಿಯಲ್ಲಿ ಯಾವುದೇ ರಾಜ್ಯಗಳಿಗೆ ವಿನಾಯಿತಿ ನೀಡಿರಲಿಲ್ಲ. ಬಳಿಕ ನಾವು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು, ಈ ಹಿನ್ನೆಲೆ ಮೇಘಾಲಯ ಸೇರಿದಂತೆ 6ನೇ ವಿಧಿಯಡಿ ಮತ್ತು ಐಎಲ್ಪಿ ಬರುವ ಪ್ರದೇಶಗಳಿಗೆ ಸಿಎಎಯಿಂದ ವಿನಾಯಿತಿ ನೀಡಲಾಗಿದೆ. 6ನೇ ವಿಧಿಯಡಿ ಬರದ ಪ್ರದೇಶಕ್ಕೂ ವಿನಾಯಿತಿ ನೀಡಬೇಕೆಂಬುವುದು ನಮ್ಮ ಕೋರಿಕೆಯಾಗಿದೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>