ಮುಂಬೈ: ‘ಲಾಕ್ಡೌನ್ ವೇಳೆ ಮನೆಯಲ್ಲಿ ಕುಳಿತು ಬೇಜಾರಗುತ್ತೆ, ದಿನವಿಡೀ ಏನು ಮಾಡಬೇಕೆಂದೇ ತೋಚುತ್ತಿಲ್ಲ, ಕೆಲಸ ಮಾಡದೆ ಸುಮ್ಮನೆ ಇರುವುದು ಕಷ್ಟವಪ್ಪಾ’... ಹೀಗೆ ಹತ್ತಾರು ಸಮಸ್ಯೆಗಳೊಂದಿಗೆ ನೂರಾರು ಮಂದಿ ಮನೋವೈದ್ಯರಿಗೆ ಅಥವಾ ಸಹಾಯವಾಣಿಗಳಿಗೆ ಕರೆ ಮಾಡುತ್ತಿರುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ, ಮಹಾರಷ್ಟ್ರದ ವಾಶಿಮ್ ಜಿಲ್ಲೆಯ ದಂಪತಿ ಲಾಕ್ಡೌನ್ ವೇಳೆ ನೀರಿನ ಸಮಸ್ಯೆಯನ್ನೇ ಬಗೆಹರಿಸಿದ್ದಾರೆ!