<p><strong>ಜಲ್ನಾ: </strong>ಕೋವಿಡ್ ಸಾಂಕ್ರಾಮಿಕ ರೋಗವು ವಿಪರೀತ ಏರಿಕೆ ಹಿನ್ನೆಲೆಯಲ್ಲಿ ಈದ್-ಉಲ್-ಫಿತರ್ ಸಂದರ್ಭದಲ್ಲಿ ಯಾವುದೇ ಸಭೆಯ ಪ್ರಾರ್ಥನೆಗಳು ಮತ್ತು ಗುಂಪು ಸೇರುವಿಕೆ ಇರುವುದಿಲ್ಲ. ಮನೆಯಲ್ಲಿಯೇ ಸುರಕ್ಷಿತವಾಗಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವಂತೆ ಮುಸ್ಲಿಂ ಧರ್ಮಗುರುಗಳು ಸಮುದಾಯಕ್ಕೆ ಸಂದೇಶ ನೀಡಿದ್ದಾರೆ.</p>.<p>ತಿಂಗಳ ಉಪವಾಸದ ಅಂತ್ಯದಲ್ಲಿ ಆಚರಿಸಲಾಗುವ ಈದ್-ಉಲ್-ಫಿತರ್ ಅನ್ನು ಚಂದ್ರನ ದರ್ಶನದ ಆಧಾರದ ಮೇಲೆ ಮೇ 13 ಅಥವಾ ಮೇ 14 ರಂದು ಆಚರಿಸಲಾಗುವುದು.</p>.<p>ಮಹಾರಾಷ್ಟ್ರ ಸರ್ಕಾರವು ಈಗಾಗಲೇ ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದು, ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು ಜನರಿಗೆ ಮನವಿ ಮಾಡಿದೆ. ಯಾವುದೇ ಮೆರವಣಿಗೆಗಳನ್ನು ನಡೆಸದಂತೆ ಮತ್ತು ರಾಜ್ಯದಲ್ಲಿ ಜಾರಿಗೊಳಿಸಲಾದ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಸಭೆಗಳನ್ನು ನಡೆಸದಂತೆ ಸಲಹೆ ನೀಡಿದೆ.</p>.<p>‘ಯಾತನೆ, ಭಯ ಮತ್ತು ಆತಂಕದ ಮಧ್ಯೆ, ನಾವು ಈ ವರ್ಷ ಈದ್ ಅನ್ನು ಮನೆಯಲ್ಲಿ ಆಚರಿಸಬೇಕಾಗಿದೆ’ ಎಂದು ಜಮೀಯತ್ ಉಲೆಮಾ-ಎ-ಹಿಂದ್ (ಅರ್ಷದ್ ಮಂಡಿ ಫ್ಯಾಕ್ಷನ್) ಮರಾಠವಾಡ ಘಟಕದ ಅಧ್ಯಕ್ಷ ಮೌಲಾನಾ ಸೊಹೆಲ್ ಹೇಳಿದ್ದಾರೆ.</p>.<p>ಜಲ್ನಾದ 'ಹೋಲಿ ಕುರಾನ್ ಸೆಂಟರ್'ನ ಸಂಯೋಜಕ ಅಬ್ದುಲ್ ಹಫೀಜ್, ಈ ವರ್ಷದ ಈದ್ ಸಂದರ್ಭದಲ್ಲಿ ಸಭೆಗಳು ಮತ್ತು ಕೂಟಗಳನ್ನಿ ನಡೆಸುವುದು ದೂರದ ಮಾತು ಎಂದು ಹೇಳಿದರು.</p>.<p>ಆದರೂ, ಜನರು ವರ್ಚುವಲ್ ಆಗಿ ಪರಸ್ಪರ ಸಂಪರ್ಕ ಸಾಧಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಲ್ನಾ: </strong>ಕೋವಿಡ್ ಸಾಂಕ್ರಾಮಿಕ ರೋಗವು ವಿಪರೀತ ಏರಿಕೆ ಹಿನ್ನೆಲೆಯಲ್ಲಿ ಈದ್-ಉಲ್-ಫಿತರ್ ಸಂದರ್ಭದಲ್ಲಿ ಯಾವುದೇ ಸಭೆಯ ಪ್ರಾರ್ಥನೆಗಳು ಮತ್ತು ಗುಂಪು ಸೇರುವಿಕೆ ಇರುವುದಿಲ್ಲ. ಮನೆಯಲ್ಲಿಯೇ ಸುರಕ್ಷಿತವಾಗಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವಂತೆ ಮುಸ್ಲಿಂ ಧರ್ಮಗುರುಗಳು ಸಮುದಾಯಕ್ಕೆ ಸಂದೇಶ ನೀಡಿದ್ದಾರೆ.</p>.<p>ತಿಂಗಳ ಉಪವಾಸದ ಅಂತ್ಯದಲ್ಲಿ ಆಚರಿಸಲಾಗುವ ಈದ್-ಉಲ್-ಫಿತರ್ ಅನ್ನು ಚಂದ್ರನ ದರ್ಶನದ ಆಧಾರದ ಮೇಲೆ ಮೇ 13 ಅಥವಾ ಮೇ 14 ರಂದು ಆಚರಿಸಲಾಗುವುದು.</p>.<p>ಮಹಾರಾಷ್ಟ್ರ ಸರ್ಕಾರವು ಈಗಾಗಲೇ ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದು, ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲು ಜನರಿಗೆ ಮನವಿ ಮಾಡಿದೆ. ಯಾವುದೇ ಮೆರವಣಿಗೆಗಳನ್ನು ನಡೆಸದಂತೆ ಮತ್ತು ರಾಜ್ಯದಲ್ಲಿ ಜಾರಿಗೊಳಿಸಲಾದ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಸಭೆಗಳನ್ನು ನಡೆಸದಂತೆ ಸಲಹೆ ನೀಡಿದೆ.</p>.<p>‘ಯಾತನೆ, ಭಯ ಮತ್ತು ಆತಂಕದ ಮಧ್ಯೆ, ನಾವು ಈ ವರ್ಷ ಈದ್ ಅನ್ನು ಮನೆಯಲ್ಲಿ ಆಚರಿಸಬೇಕಾಗಿದೆ’ ಎಂದು ಜಮೀಯತ್ ಉಲೆಮಾ-ಎ-ಹಿಂದ್ (ಅರ್ಷದ್ ಮಂಡಿ ಫ್ಯಾಕ್ಷನ್) ಮರಾಠವಾಡ ಘಟಕದ ಅಧ್ಯಕ್ಷ ಮೌಲಾನಾ ಸೊಹೆಲ್ ಹೇಳಿದ್ದಾರೆ.</p>.<p>ಜಲ್ನಾದ 'ಹೋಲಿ ಕುರಾನ್ ಸೆಂಟರ್'ನ ಸಂಯೋಜಕ ಅಬ್ದುಲ್ ಹಫೀಜ್, ಈ ವರ್ಷದ ಈದ್ ಸಂದರ್ಭದಲ್ಲಿ ಸಭೆಗಳು ಮತ್ತು ಕೂಟಗಳನ್ನಿ ನಡೆಸುವುದು ದೂರದ ಮಾತು ಎಂದು ಹೇಳಿದರು.</p>.<p>ಆದರೂ, ಜನರು ವರ್ಚುವಲ್ ಆಗಿ ಪರಸ್ಪರ ಸಂಪರ್ಕ ಸಾಧಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>