<p><strong>ನವದೆಹಲಿ</strong>: ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ 2005ರ ಮರುಪರಿಶೀಲನೆಗೆ ಕರೆ ನೀಡಿರುವ ಈಚಿನ ಆರ್ಥಿಕ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸಿಪಿಐನ ರಾಜ್ಯಸಭಾ ಸಂಸದ ಪಿ. ಸಂದೋಷ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.</p>.<p>‘ಆಂತರಿಕ ಚರ್ಚೆಗಳನ್ನು ರಕ್ಷಿಸಲಿಕ್ಕಾಗಿ ಆರ್ಟಿಐ ಕಾಯ್ದೆಯ ಮರುಪರಿಶೀಲನೆಯ ಅಗತ್ಯವಿರುವ ಸಲಹೆಯು, ಭ್ರಷ್ಟಾಚಾರವನ್ನು ನ್ಯಾಯಸಮ್ಮತಗೊಳಿಸುವ ಮತ್ತು ಆಡಳಿತಾತ್ಮಕ ದಕ್ಷತೆಯ ಸೋಗಿನಲ್ಲಿ ತಪ್ಪುಗಳನ್ನು ರಕ್ಷಿಸುವ ಅಪಾಯವನ್ನು ಎದುರಿಸುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.</p>.<p>ಎಡಪಕ್ಷಗಳ ನಿರ್ಣಾಯಕ ಬೆಂಬಲದೊಂದಿಗೆ ಯುಪಿಎ–1 ಸರ್ಕಾರ ಜಾರಿಗೆ ತಂದ ಆರ್ಟಿಐ ಕಾಯ್ದೆಯು, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆಯನ್ನು ಸಾಂಸ್ಥಿಕಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದಿದ್ದಾರೆ.</p>.<p>‘ನಾಗರಿಕರ ಸಬಲೀಕರಣ, ಭ್ರಷ್ಟಾಚಾರ ನಿಗ್ರಹಿಸುವುದು ಪ್ರಜ್ಞಾಪೂರ್ವಕ ರಾಜಕೀಯ ಆಯ್ಕೆಯಾಗಿದೆ. ಇದರ ಚೈತನ್ಯವನ್ನೇ ದುರ್ಬಲಗೊಳಿಸುವ ಪ್ರಯತ್ನವು ಸಾಂವಿಧಾನಿಕ ಆಡಳಿತದ ಆಶಯವನ್ನೇ ಬುಡಮೇಲುಗೊಳಿಸಲಿದೆ’ ಎಂದಿದ್ದಾರೆ.</p>.<p>‘ಪ್ರಜಾಪ್ರಭುತ್ವ ಆಡಳಿತವು ಮುಕ್ತತೆಯಿಂದ ಬಳಲುತ್ತಿಲ್ಲ. ಇದು ಗೋಪ್ಯತೆ, ಅನಿಯಂತ್ರಿತತೆ ಮತ್ತು ಗೋಚರಿಸದ ಪ್ರಭಾವದಿಂದ ಬಳಲುತ್ತಿದೆ. ಕಳೆದ ದಶಕದಲ್ಲೇ ಆರ್ಟಿಐ ಕಾಯ್ದೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ಮತ್ತಷ್ಟು ದುರ್ಬಲಗೊಳಿಸುವಿಕೆಯು ಪ್ರಜಾಪ್ರಭುತ್ವದ ಹೊಣೆಗಾರಿಕೆ ಮತ್ತು ಸಾರ್ವಜನಿಕ ನಂಬಿಕೆಗೆ ಹಾನಿಕಾರಕವಾಗಿದೆ’ ಎಂದಿರುವ ಸಂದೋಷ್, ಈ ನಿಲುವನ್ನು ಮರುಪರಿಶೀಲಿಸಿ ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ 2005ರ ಮರುಪರಿಶೀಲನೆಗೆ ಕರೆ ನೀಡಿರುವ ಈಚಿನ ಆರ್ಥಿಕ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸಿಪಿಐನ ರಾಜ್ಯಸಭಾ ಸಂಸದ ಪಿ. ಸಂದೋಷ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.</p>.<p>‘ಆಂತರಿಕ ಚರ್ಚೆಗಳನ್ನು ರಕ್ಷಿಸಲಿಕ್ಕಾಗಿ ಆರ್ಟಿಐ ಕಾಯ್ದೆಯ ಮರುಪರಿಶೀಲನೆಯ ಅಗತ್ಯವಿರುವ ಸಲಹೆಯು, ಭ್ರಷ್ಟಾಚಾರವನ್ನು ನ್ಯಾಯಸಮ್ಮತಗೊಳಿಸುವ ಮತ್ತು ಆಡಳಿತಾತ್ಮಕ ದಕ್ಷತೆಯ ಸೋಗಿನಲ್ಲಿ ತಪ್ಪುಗಳನ್ನು ರಕ್ಷಿಸುವ ಅಪಾಯವನ್ನು ಎದುರಿಸುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.</p>.<p>ಎಡಪಕ್ಷಗಳ ನಿರ್ಣಾಯಕ ಬೆಂಬಲದೊಂದಿಗೆ ಯುಪಿಎ–1 ಸರ್ಕಾರ ಜಾರಿಗೆ ತಂದ ಆರ್ಟಿಐ ಕಾಯ್ದೆಯು, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆಯನ್ನು ಸಾಂಸ್ಥಿಕಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದಿದ್ದಾರೆ.</p>.<p>‘ನಾಗರಿಕರ ಸಬಲೀಕರಣ, ಭ್ರಷ್ಟಾಚಾರ ನಿಗ್ರಹಿಸುವುದು ಪ್ರಜ್ಞಾಪೂರ್ವಕ ರಾಜಕೀಯ ಆಯ್ಕೆಯಾಗಿದೆ. ಇದರ ಚೈತನ್ಯವನ್ನೇ ದುರ್ಬಲಗೊಳಿಸುವ ಪ್ರಯತ್ನವು ಸಾಂವಿಧಾನಿಕ ಆಡಳಿತದ ಆಶಯವನ್ನೇ ಬುಡಮೇಲುಗೊಳಿಸಲಿದೆ’ ಎಂದಿದ್ದಾರೆ.</p>.<p>‘ಪ್ರಜಾಪ್ರಭುತ್ವ ಆಡಳಿತವು ಮುಕ್ತತೆಯಿಂದ ಬಳಲುತ್ತಿಲ್ಲ. ಇದು ಗೋಪ್ಯತೆ, ಅನಿಯಂತ್ರಿತತೆ ಮತ್ತು ಗೋಚರಿಸದ ಪ್ರಭಾವದಿಂದ ಬಳಲುತ್ತಿದೆ. ಕಳೆದ ದಶಕದಲ್ಲೇ ಆರ್ಟಿಐ ಕಾಯ್ದೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ಮತ್ತಷ್ಟು ದುರ್ಬಲಗೊಳಿಸುವಿಕೆಯು ಪ್ರಜಾಪ್ರಭುತ್ವದ ಹೊಣೆಗಾರಿಕೆ ಮತ್ತು ಸಾರ್ವಜನಿಕ ನಂಬಿಕೆಗೆ ಹಾನಿಕಾರಕವಾಗಿದೆ’ ಎಂದಿರುವ ಸಂದೋಷ್, ಈ ನಿಲುವನ್ನು ಮರುಪರಿಶೀಲಿಸಿ ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>