ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ತಿತ್ಲಿ ಚಂಡಮಾರುತ: 8 ರೈಲುಗಳು ಸ್ಥಗಿತ

ಕೆಲವು ರೈಲುಗಳ ಸಮಯ ಬದಲಾವಣೆ
Last Updated 11 ಅಕ್ಟೋಬರ್ 2018, 11:17 IST
ಅಕ್ಷರ ಗಾತ್ರ

ನವದೆಹಲಿ: ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ತಿತ್ಲಿ ಚಂಡಮಾರುತದ ಅಬ್ಬರ ಜೋರಾದ ಕಾರಣ ರೈಲ್ವೆ ಇಲಾಖೆಯು ಕೆಲವು ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಿದೆ ಹಾಗೂ ಸಮಯ ಬದಲಾವಣೆ ಮಾಡಿದೆ.

ಈ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹಾಗೂ ಪಟ್ಟಿಯನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪೂರ್ವ ಕರಾವಳಿ ರೈಲ್ವೆಯು ಇದುವರೆಗೆ ಒಟ್ಟು 8 ರೈಲುಗಳು ಹಾಗೂ ಒಡಿಶಾದ ಕುರ್ದಾ, ಆಂಧ್ರಪ್ರದೇಶದ ವಿಜಯನಗರದ ನಡುವಿನ ಸೇವೆಯನ್ನು ಬುಧವಾರದಿಂದಲೇ ಅಮಾನತುಗೊಳಿಸಲಾಗಿದೆ.

ಬೆಂಗಳೂರಿನಿಂದ ಹೊರಡುವ ರೈಲುಗಳುಸ್ಥಗಿತ

* ನಂ. 12864 ಯಶವಂತಪುರ–ಹೌರಾ ಎಕ್ಸ್‌ಪ್ರೆಸ್
* ನಂ. 12509 ಬೆಂಗಳೂರು–ಗುವಾಹಟಿ ಎಕ್ಸ್‌ಪ್ರೆಸ್
* ನಂ. 15227 ಯಶವಂತಪುರ–ಮುಜಾಫರ್‌ಪುರ ಎಕ್ಸ್‌ಪ್ರೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT