ಪೇಜಾವರಸ್ವಾಮಿಗಳು ದಕ್ಷಿಣ ಕನ್ನಡದ ಪುತ್ತೂರಿನ ರಾಮಕುಂಜದವರು. ಆಗ ಅವರು ಐದು ವರ್ಷದ ಬಾಲಕ. ಅವರ ಪೂರ್ವಾಶ್ರಮದ ಹೆಸರು ವೆಂಕಟರಮಣ. ಒಂದು ದಿನ ಎರಟಾಡಿಯ ತಮ್ಮ ತೋಟದಲ್ಲಿ ಆಟವಾಡುವ ವೇಳೆ ವೆಂಕಟರಮಣ ಕೆರೆಗೆ ಬಿದ್ದಿದ್ದ. ಆಗ ಆತನ ಜೊತೆ ಆಗ ಇದ್ದದ್ದು ಆಪ್ತ ಸ್ನೇಹಿತ ಓಡಿ. ಆತ ದಲಿತ. ವೆಂಕಟರಮಣ ಕೆರೆಗೆ ಬಿದ್ದುದನ್ನು ನೋಡಿ ಓಡಿ ಆತಂಕಕ್ಕೀಡಾಗಿದ್ದ. ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಓಡಿಯ ಅಪ್ಪ ಚೋಮ ಕರೆಯ ಬಳಿಗೆ ಧಾವಿಸಿದರೂ, ಕೆರೆಗೆ ಧುಮುಕಿ ವೆಂಕಟರಮಣನನ್ನು ರಕ್ಷಿಸುವಂತಿರಲಿಲ್ಲ. ಕಾರಣ ಅಸ್ಪೃಶ್ಯತೆ. ಆದರೆ, ಇಬ್ಬರೂ ಕೂಗುತ್ತಾ ಮನೆಗೆ ಓಡೋಡಿ ಬಂದು ವೆಂಕಟರಮಣ ಕೆರೆಗೆ ಬಿದ್ದ ಸುದ್ದಿ ಮುಟ್ಟಿಸಿದರು. ವೆಂಕಟರಮಣನ ತಂದೆ ನಾರಾಯಣ ಆಚಾರ್ಯ ಕೆರೆಗೆ ಹಾರಿ ಮಗನನ್ನು ಎತ್ತಿದರು.