ಕಾರು ಬೈಕಿಗೆ ಗುದ್ದಿದ್ದಕ್ಕೆ ಬೈಕ್ ಸವಾರ ₹ 4000 ಪರಿಹಾರ ನೀಡುವಂತೆ ಆಗ್ರಹಿಸಿದ. ಅದೇ ವೇಳೆ ಅಲ್ಲಿಗೆ ಬಂದ ಪೊಲೀಸ್ ವಾಹನದಲ್ಲಿದ್ದ ಮೂವರು ಪೊಲೀಸರು ಮಾಂಸ ಮಾರಾಟಗಾರರಿಂದ ₹2.500 ಪಡೆದು ಬೈಕ್ ಚಾಲಕನಿಗೆ ನೀಡಿದರು. ಬಳಿಕ ಗೋ–ರಕ್ಷಕರು ಎನ್ನಲಾದ ನಾಲ್ವರು ಇತರರನ್ನು ಸ್ಥಳಕ್ಕೆ ಕರೆದು ₹ 15,000 ನೀಡುವಂತೆ ಬೆದರಿಕೆ ಹಾಕಿದರು. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರನ್ನು ಥಳಿಸಿ ಅವರ ಮೂತ್ರ ವಿಸರ್ಜನೆ ಮಾಡಿದರು ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಆರೋಪಿಗಳು ಸಂತ್ರಸ್ತರಿಂದ ₹25,000 ಕಸಿದುಕೊಂಡಿದ್ದಾರೆ ಎಂದು ಕೂಡಾ ಹೇಳಲಾಗಿದೆ.