ನವದೆಹಲಿ: ಎಎಪಿಯ ಏಳು ಮಂದಿ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾಡಿರುವ ಆರೋಪದ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ್ ಅವರು ಸೋಮವಾರ ತಿಳಿಸಿದರು.
ವಿರೋಧಪಕ್ಷದ ನಾಯಕ ರಾಮ್ವೀರ್ ಬಿಧೂರಿ ಅವರ ನೇತೃತ್ವದ ಬಿಜೆಪಿ ಶಾಸಕರ ನಿಯೋಗವು ದೆಹಲಿ ಪೊಲೀಸ್ ಕಮಿಷನರ್ಗೆ ಮಂಗಳವಾರ ದೂರು ಸಲ್ಲಿಸಲಿದೆ ಎಂದು ಹೇಳಿದರು.
ಪಕ್ಷ ತೊರೆಯಲು ಎಎಪಿಯ ಏಳು ಮಂದಿ ಶಾಸಕರಿಗೆ ಬಿಜೆಪಿಯು ತಲಾ ₹25 ಕೋಟಿ ನೀಡುವ ಆಮಿಷವೊಡ್ಡಿದೆ ಎಂದು ಕೇಜ್ರಿವಾಲ್ ಅವರು ಈಚೆಗೆ ಆರೋಪಿಸಿದ್ದರು.