<p><strong>ದೆಹಲಿ</strong>: ‘ಭಾರತೀಯ ಉಡುಪು ಧರಿಸಿದ್ದಕ್ಕಾಗಿ ದೆಹಲಿ ಪಿತಂಪುರ ಪ್ರದೇಶದಲ್ಲಿರುವ ರೆಸ್ಟೋರೆಂಟ್ವೊಂದು ನಮಗೆ ಪ್ರವೇಶ ನಿರಾಕರಿಸಿದೆ’ ಎಂದು ದಂಪತಿಯೊಬ್ಬರು ಆರೋಪಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p><p>‘ಇತರರಿಗೆ ರೆಸ್ಟೋರೆಂಟ್ ಒಳಗೆ ಹೋಗಲು ಬಿಡುತ್ತಿದ್ದರು. ನಮಗೆ ಪ್ರವೇಶ ನಿರಾಕರಿಸಿದ್ದಾರೆ. ಉಡುಪು ನೋಡಿ ರೆಸ್ಟೋರೆಂಟ್ ಒಳಗೆ ಬಿಡುತ್ತಿದ್ದರು. ಅಲ್ಲದೇ ರೆಸ್ಟೋರೆಂಟ್ನ ವ್ಯವಸ್ಥಾಪಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ದಂಪತಿ ಆರೋಪಿಸಿದ್ದಾರೆ.</p><p>‘ಬಟ್ಟೆ ನೋಡಿ ಪ್ರವೇಶ ನೀಡುವುದು ಸರಿಯಲ್ಲ. ರೆಸ್ಟೋರೆಂಟ್ ಅನ್ನು ತಕ್ಷಣ ಮುಚ್ಚಿ’ ಎಂದು ಅವರು ಆಗ್ರಹಿಸಿದ್ದಾರೆ.</p>.<p>ಏತನ್ಮಧ್ಯೆ, ಈ ಆರೋಪವನ್ನು ರೆಸ್ಟೋರೆಂಟ್ ಮಾಲೀಕ ನೀರಜ್ ಅಗರ್ವಾಲ್ ನಿರಾಕರಿಸಿದ್ದಾರೆ. </p><p>‘ದಂಪತಿ ಟೇಬಲ್ ಬುಕ್ ಮಾಡಿರಲಿಲ್ಲ. ಅದಕ್ಕಾಗಿಯೇ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಇಂತಹದೇ ಉಡುಪು ಧರಿಸಿ ಬರಬೇಕು ಎಂಬ ನಿಯಮ ನಮ್ಮ ರೆಸ್ಟೋರೆಂಟ್ನಲ್ಲಿ ಇಲ್ಲ. ಎಲ್ಲಾ ಗ್ರಾಹಕರನ್ನು ಪ್ರೀತಿಯಿಂದ ಸ್ವಾಗತಿಸಲಾಗುತ್ತದೆ’ ಎಂದಿದ್ದಾರೆ.</p><p>ಇನ್ನು, ದಂಪತಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕಪಿಲ್ ಮಿಶ್ರಾ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಈ ವಿಷಯದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೆಹಲಿ</strong>: ‘ಭಾರತೀಯ ಉಡುಪು ಧರಿಸಿದ್ದಕ್ಕಾಗಿ ದೆಹಲಿ ಪಿತಂಪುರ ಪ್ರದೇಶದಲ್ಲಿರುವ ರೆಸ್ಟೋರೆಂಟ್ವೊಂದು ನಮಗೆ ಪ್ರವೇಶ ನಿರಾಕರಿಸಿದೆ’ ಎಂದು ದಂಪತಿಯೊಬ್ಬರು ಆರೋಪಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.</p><p>‘ಇತರರಿಗೆ ರೆಸ್ಟೋರೆಂಟ್ ಒಳಗೆ ಹೋಗಲು ಬಿಡುತ್ತಿದ್ದರು. ನಮಗೆ ಪ್ರವೇಶ ನಿರಾಕರಿಸಿದ್ದಾರೆ. ಉಡುಪು ನೋಡಿ ರೆಸ್ಟೋರೆಂಟ್ ಒಳಗೆ ಬಿಡುತ್ತಿದ್ದರು. ಅಲ್ಲದೇ ರೆಸ್ಟೋರೆಂಟ್ನ ವ್ಯವಸ್ಥಾಪಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ದಂಪತಿ ಆರೋಪಿಸಿದ್ದಾರೆ.</p><p>‘ಬಟ್ಟೆ ನೋಡಿ ಪ್ರವೇಶ ನೀಡುವುದು ಸರಿಯಲ್ಲ. ರೆಸ್ಟೋರೆಂಟ್ ಅನ್ನು ತಕ್ಷಣ ಮುಚ್ಚಿ’ ಎಂದು ಅವರು ಆಗ್ರಹಿಸಿದ್ದಾರೆ.</p>.<p>ಏತನ್ಮಧ್ಯೆ, ಈ ಆರೋಪವನ್ನು ರೆಸ್ಟೋರೆಂಟ್ ಮಾಲೀಕ ನೀರಜ್ ಅಗರ್ವಾಲ್ ನಿರಾಕರಿಸಿದ್ದಾರೆ. </p><p>‘ದಂಪತಿ ಟೇಬಲ್ ಬುಕ್ ಮಾಡಿರಲಿಲ್ಲ. ಅದಕ್ಕಾಗಿಯೇ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಇಂತಹದೇ ಉಡುಪು ಧರಿಸಿ ಬರಬೇಕು ಎಂಬ ನಿಯಮ ನಮ್ಮ ರೆಸ್ಟೋರೆಂಟ್ನಲ್ಲಿ ಇಲ್ಲ. ಎಲ್ಲಾ ಗ್ರಾಹಕರನ್ನು ಪ್ರೀತಿಯಿಂದ ಸ್ವಾಗತಿಸಲಾಗುತ್ತದೆ’ ಎಂದಿದ್ದಾರೆ.</p><p>ಇನ್ನು, ದಂಪತಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕಪಿಲ್ ಮಿಶ್ರಾ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಈ ವಿಷಯದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>