'ನಿಷ್ಠಾ ಯಾತ್ರೆ'ಯ ಭಾಗವಾಗಿ ಮುಂಬೈ ಉತ್ತರದ ಉಪನಗರ ದಹಿಸರ್ನಲ್ಲಿ ಮಾತನಾಡಿದ ಅವರು, ಪಕ್ಷ ತೊರೆಯಲು ಬಯಸಿದವರು ಹೋಗಿದ್ದಾರೆ. ಆದರೆ, ತಳಮಟ್ಟದ ಶಿವಸೈನಿಕರು ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಪಕ್ಷ ಬೆಂಬಲಿಸುತ್ತಿದ್ದಾರೆ.ಪ್ರತಿ ಕ್ಷೇತ್ರದಲ್ಲಿ ಎರಡರಿಂದ ಮೂರು ಶಿವಸೈನಿಕರು ಇದ್ದಾರೆ. ಪುರುಷರು ಮತ್ತು ಮಹಿಳೆಯರು ಪ್ರತಿಸ್ಪರ್ಧಿಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಠಾಕ್ರೆ ಹೇಳಿದರು.