<p>ಪಿಟಿಐ</p>.<p><strong>ವಡೋದರಾ</strong>: ಕುಟುಂಬ ಸಮೇತ ಊಟಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿಯೊಬ್ಬರು ತೆರೆದ ಒಳಚರಂಡಿ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್ನ ವಡೋದರಾದಲ್ಲಿ ನಡೆದಿದೆ.</p>.<p>ಮೃತರನ್ನು ನಿವೃತ್ತ ಎಎಸ್ಪಿಯೊಬ್ಬರ ಪುತ್ರ, 40 ವರ್ಷದ ವಿಪುಲ್ಸಿಂಹ ಜಾಲಾ ಎಂದು ಗುರುತಿಸಲಾಗಿದೆ. ಮಂಜುಳಾಪುರ ಕ್ರೀಡಾ ಸಂಕೀರ್ಣದ ಬಳಿ ಸ್ವಚ್ಛಗೊಳಿಸಲು ತೆರೆದು, ಮುಚ್ಚದೇ ಬಿಟ್ಟಿದ್ದ 15ರಿಂದ 30 ಅಡಿ ಆಳದ ಒಳಚರಂಡಿ ಗುಂಡಿಗೆ ವಿಪುಲ್ ಬಿದ್ದಿದ್ದರು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.</p>.<p>‘ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಕಾರು ನಿಲ್ಲಿಸಲು ಹೋದ ವಿಪುಲ್ 20 ನಿಮಿಷದ ನಂತರವೂ ಬರಲಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಅಲ್ಲೇ ಇದ್ದ ತೆರೆದ ಗುಂಡಿಯಲ್ಲಿ ನೋಡಿದಾಗ ಬೂಟುಗಳು ತೇಲುತ್ತಿದ್ದವು’ ಎಂದು ಸಂಬಂಧಿ ಗಿರಿರಾಜ್ ಸಿಂಹ ಚುಡಾಸಮಾ ತಿಳಿಸಿದ್ದಾರೆ.</p>.<p>ಅಗ್ನಿಶಾಮಕ ದಳದ ನೆರವಿನಿಂದ ವಿಪುಲ್ ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವಡೋದರಾ ಪಾಲಿಕೆ ಆಯುಕ್ತ ಅರುಣ್ ಮಹೇಶ್ ಬಾಬು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಿಟಿಐ</p>.<p><strong>ವಡೋದರಾ</strong>: ಕುಟುಂಬ ಸಮೇತ ಊಟಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿಯೊಬ್ಬರು ತೆರೆದ ಒಳಚರಂಡಿ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್ನ ವಡೋದರಾದಲ್ಲಿ ನಡೆದಿದೆ.</p>.<p>ಮೃತರನ್ನು ನಿವೃತ್ತ ಎಎಸ್ಪಿಯೊಬ್ಬರ ಪುತ್ರ, 40 ವರ್ಷದ ವಿಪುಲ್ಸಿಂಹ ಜಾಲಾ ಎಂದು ಗುರುತಿಸಲಾಗಿದೆ. ಮಂಜುಳಾಪುರ ಕ್ರೀಡಾ ಸಂಕೀರ್ಣದ ಬಳಿ ಸ್ವಚ್ಛಗೊಳಿಸಲು ತೆರೆದು, ಮುಚ್ಚದೇ ಬಿಟ್ಟಿದ್ದ 15ರಿಂದ 30 ಅಡಿ ಆಳದ ಒಳಚರಂಡಿ ಗುಂಡಿಗೆ ವಿಪುಲ್ ಬಿದ್ದಿದ್ದರು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.</p>.<p>‘ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಕಾರು ನಿಲ್ಲಿಸಲು ಹೋದ ವಿಪುಲ್ 20 ನಿಮಿಷದ ನಂತರವೂ ಬರಲಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಅಲ್ಲೇ ಇದ್ದ ತೆರೆದ ಗುಂಡಿಯಲ್ಲಿ ನೋಡಿದಾಗ ಬೂಟುಗಳು ತೇಲುತ್ತಿದ್ದವು’ ಎಂದು ಸಂಬಂಧಿ ಗಿರಿರಾಜ್ ಸಿಂಹ ಚುಡಾಸಮಾ ತಿಳಿಸಿದ್ದಾರೆ.</p>.<p>ಅಗ್ನಿಶಾಮಕ ದಳದ ನೆರವಿನಿಂದ ವಿಪುಲ್ ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವಡೋದರಾ ಪಾಲಿಕೆ ಆಯುಕ್ತ ಅರುಣ್ ಮಹೇಶ್ ಬಾಬು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>