<p><strong>ಚೆನ್ನೈ:</strong>ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಆಪ್ತ, ಶಾಸಕ ಜೆ. ಅನ್ಬಳಗನ್ (62)ಕೋವಿಡ್-19ನಿಂದ ಸಾವಿಗೀಡಾಗಿದ್ದಾರೆ.ಕಳೆದ 8 ದಿನಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.</p>.<p>ಚೇಪಕ್- ಟ್ರಿಪ್ಲಿಕೇನ್ ಶಾಸಕರಾಗಿದ್ದ ಅನ್ಬಳಗನ್ ಬುಧವಾರ ಬೆಳಗ್ಗೆ 8.05ಕ್ಕೆ ಡಾಕ್ಟರ್ ರೇಲಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಜೂನ್ 2ರಂದು ಆಸ್ಪತ್ರೆಗೆ ದಾಖಲಾದ ಇವರಿಗೆ ಕೊರೊನಾವೈರಸ್ ಸೋಂಕು ಇರುವುದಾಗಿ ದೃಢಪಟ್ಟಿತ್ತು.</p>.<p>ಹುಟ್ಟಿದ ದಿನದಂದೇ ಅನ್ಬಳಗನ್ ಸಾವಿಗೀಡಾಗಿದ್ದು, ಕೋವಿಡ್-19ನಿಂದಾಗಿ ತಮಿಳುನಾಡಿನಲ್ಲಿ ಮೃತಪಟ್ಟ ಮೊದಲ ಜನಪ್ರತಿನಿಧಿಯಾಗಿದ್ದಾರೆ.</p>.<p>ವೆಂಟಿಲೇಟರ್ನಲ್ಲಿದ್ದ ಅನ್ಬಳಕನ್ ಅವರ ಆರೋಗ್ಯ ಸ್ಥಿತಿ ಜೂನ್ 5ರಂದು ಅಲ್ಪ ಸುಧಾರಿಸಿದ್ದರೂ ಜೂನ್ 8ರಂದು ಗಂಭೀರವಾಗಿತ್ತು.</p>.<p>ಡಿಎಂಕೆ ಪಕ್ಷದಲ್ಲಿನ ಹಿರಿಯ ನಾಯಕರ ಆಪ್ತರಾಗಿದ್ದಾರೆ ಅನ್ಬಳಕನ್. ಕರುಣಾನಿಧಿ ಅವರು 2011ರಲ್ಲಿ ಚೇಪಕ್ ಚುನಾವಣಾ ಕ್ಷೇತ್ರ ಬಿಟ್ಟು ತಿರುವನೂರ್ ಚುನಾವಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ, ಚೇಪಕ್ ಕ್ಷೇತ್ರದ ಪ್ರತಿನಿಧಿಯಾಗಿ ಕರುಣಾನಿಧಿಯವರೇ ಅನ್ಬಳಕನ್ ಅವರನ್ನು ಆಯ್ಕೆ ಮಾಡಿದ್ದರು.<br />2001ರಲ್ಲಿ ಟಿ ನಗರ್ ಚುನಾವಣಾ ಕ್ಷೇತ್ರದಲ್ಲಿ ಗೆದ್ದ ಅನ್ಬಳಕನ್, 2006ರಲ್ಲಿ ಸ್ಪರ್ಧಿಸಿಪರಾಭವಗೊಂಡಿದ್ದರು.2011 ಮತ್ತು 2016ರಲ್ಲಿ ಚೇಪಕ್- ಟ್ರಿಪ್ಲಿಕೇನ್ ಚುನಾವಣಾ ಕ್ಷೇತ್ರದಲ್ಲಿ ಇವರುಗೆದ್ದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong>ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಆಪ್ತ, ಶಾಸಕ ಜೆ. ಅನ್ಬಳಗನ್ (62)ಕೋವಿಡ್-19ನಿಂದ ಸಾವಿಗೀಡಾಗಿದ್ದಾರೆ.ಕಳೆದ 8 ದಿನಗಳಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.</p>.<p>ಚೇಪಕ್- ಟ್ರಿಪ್ಲಿಕೇನ್ ಶಾಸಕರಾಗಿದ್ದ ಅನ್ಬಳಗನ್ ಬುಧವಾರ ಬೆಳಗ್ಗೆ 8.05ಕ್ಕೆ ಡಾಕ್ಟರ್ ರೇಲಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಜೂನ್ 2ರಂದು ಆಸ್ಪತ್ರೆಗೆ ದಾಖಲಾದ ಇವರಿಗೆ ಕೊರೊನಾವೈರಸ್ ಸೋಂಕು ಇರುವುದಾಗಿ ದೃಢಪಟ್ಟಿತ್ತು.</p>.<p>ಹುಟ್ಟಿದ ದಿನದಂದೇ ಅನ್ಬಳಗನ್ ಸಾವಿಗೀಡಾಗಿದ್ದು, ಕೋವಿಡ್-19ನಿಂದಾಗಿ ತಮಿಳುನಾಡಿನಲ್ಲಿ ಮೃತಪಟ್ಟ ಮೊದಲ ಜನಪ್ರತಿನಿಧಿಯಾಗಿದ್ದಾರೆ.</p>.<p>ವೆಂಟಿಲೇಟರ್ನಲ್ಲಿದ್ದ ಅನ್ಬಳಕನ್ ಅವರ ಆರೋಗ್ಯ ಸ್ಥಿತಿ ಜೂನ್ 5ರಂದು ಅಲ್ಪ ಸುಧಾರಿಸಿದ್ದರೂ ಜೂನ್ 8ರಂದು ಗಂಭೀರವಾಗಿತ್ತು.</p>.<p>ಡಿಎಂಕೆ ಪಕ್ಷದಲ್ಲಿನ ಹಿರಿಯ ನಾಯಕರ ಆಪ್ತರಾಗಿದ್ದಾರೆ ಅನ್ಬಳಕನ್. ಕರುಣಾನಿಧಿ ಅವರು 2011ರಲ್ಲಿ ಚೇಪಕ್ ಚುನಾವಣಾ ಕ್ಷೇತ್ರ ಬಿಟ್ಟು ತಿರುವನೂರ್ ಚುನಾವಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ, ಚೇಪಕ್ ಕ್ಷೇತ್ರದ ಪ್ರತಿನಿಧಿಯಾಗಿ ಕರುಣಾನಿಧಿಯವರೇ ಅನ್ಬಳಕನ್ ಅವರನ್ನು ಆಯ್ಕೆ ಮಾಡಿದ್ದರು.<br />2001ರಲ್ಲಿ ಟಿ ನಗರ್ ಚುನಾವಣಾ ಕ್ಷೇತ್ರದಲ್ಲಿ ಗೆದ್ದ ಅನ್ಬಳಕನ್, 2006ರಲ್ಲಿ ಸ್ಪರ್ಧಿಸಿಪರಾಭವಗೊಂಡಿದ್ದರು.2011 ಮತ್ತು 2016ರಲ್ಲಿ ಚೇಪಕ್- ಟ್ರಿಪ್ಲಿಕೇನ್ ಚುನಾವಣಾ ಕ್ಷೇತ್ರದಲ್ಲಿ ಇವರುಗೆದ್ದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>