‘ಅಧಿಕಾರಕ್ಕೆ ಬಂದ ನೂರು ದಿನದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಸ್ಟಾಲಿನ್ ಹೇಳುತ್ತಾರೆ. ಹಾಗಿದ್ದರೆ ಅವರು ಹಿಂದೆ ಡಿಸಿಎಂ ಹಾಗೂ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಪಳನಿಸ್ವಾಮಿ ಪ್ರಶ್ನಿಸಿದರು. ಕಾಂಗ್ರೆಸ್ನ ಸ್ಥಿತಿಯ ಬಗ್ಗೆ ಲೇವಡಿ ಮಾಡುತ್ತಾ, ‘2011ರಲ್ಲಿ 63 ಹಾಗೂ 2016ರಲ್ಲಿ 41 ಸ್ಥಾನಗಳನ್ನು ಗೆದ್ದಿದ್ದ, ಶತಮಾನಕ್ಕೂ ಹಳೆಯದಾದ ಪಕ್ಷವು ಈ ಬಾರಿ 25 ಕ್ಷೇತ್ರಗಳಿಗಾಗಿ ಮಿತ್ರಪಕ್ಷದ ಮುಂದೆ ಕೈಯೊಡ್ಡಿದೆ’ ಎಂದರು.