<p><strong>ನವದೆಹಲಿ:</strong> ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ವೇಳೆಯೇ ನ್ಯಾಯಾಲಯದಲ್ಲಿ ವಾಮಾಚಾರ ಎಸಗಿ ಸರ್ಕಾರಿ ನೌಕರನಿಗೆ ಉದ್ದೇಶಪೂರ್ವಕವಾಗಿ ಅವಮಾನವೆಸಗಿದ ಆರೋಪಿ ವೈದ್ಯನಿಗೆ ಕಲಾಪ ಪೂರ್ಣಗೊಳಿಸುವವರೆಗೂ ನ್ಯಾಯಾಲಯದ ಕೊಠಡಿಯಲ್ಲಿ ಇರುವಂತೆ ತೀಜ್ ಹಜಾರಿ ನ್ಯಾಯಾಲಯವು ಸೂಚಿಸಿದೆ.</p>.<p>‘ವೃತ್ತಿಯಲ್ಲಿ ವೈದ್ಯರಾಗಿರುವ ಆರೋಪಿ ಡಾ. ಚಂದರ್ ವಿಭಾಸ್ ಅವರ ವರ್ತನೆಯು ಆಘಾತಕಾರಿಯಾಗಿದೆ. ಅತ್ಯಂತ ವಿದ್ಯಾವಂತ, ಗಣ್ಯವರ್ಗದವರಾಗಿ ವಿನಾಕಾರಣ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸಿದ್ದನ್ನು ಒಪ್ಪುವಂತಹದ್ದಲ್ಲ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶೆಫಾಲಿ ಬರ್ನಾಲ ಟಂಡನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p><br>2025ರ ಆಗಸ್ಟ್ 11ರಂದು ನ್ಯಾಯಾಲಯದ ಕಲಾಪದ ವೇಳೆ ಆರೋಪಿಯು ತಮ್ಮ ಮೇಲೆ ಅಕ್ಕಿ ಚೆಲ್ಲಿದ್ದನ್ನು ಸಿಬ್ಬಂದಿಯು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಇದರಿಂದ 15ರಿಂದ 20 ನಿಮಿಷಗಳ ಕಲಾಪ ನಡೆದಿರಲಿಲ್ಲ. ಆರೋಪಿ ಪರ ಹಾಜರಾಗಿದ್ದ ವಕೀಲರು ಕೂಡ ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಆರೋಪಿಯನ್ನು ವಿಚಾರಿಸಿದಾಗ, ಕೈಯಲ್ಲಿದ್ದ ಅಕ್ಕಿ ಕೆಳಗೆ ಚೆಲ್ಲಿತ್ತು ಎಂದು ತಿಳಿಸಿದ್ದರು. ಆದರೆ, ನ್ಯಾಯಾಲಯದ ಕಲಾಪಕ್ಕೆ ಅಕ್ಕಿ ಏಕೆ ತೆಗೆದುಕೊಂಡು ಬರಲಾಗಿತ್ತು ಎಂದು ತಿಳಿಸಿರಲಿಲ್ಲ.</p>.<p><strong>ಕ್ಷಮೆಯಾಚನೆ–ದಂಡ:</strong> ‘ತನ್ನ ನಡೆಯ ಕುರಿತು ಆರೋಪಿ ವೈದ್ಯನು ಪಶ್ಚಾತ್ತಾಪಪಟ್ಟಿದ್ದು, ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಕಲಾಪ ಮುಗಿಯುವವರೆಗೂ ನಿಲ್ಲುವಂತೆ ಸೂಚಿಸಿ, ₹2 ಸಾವಿರ ದಂಡ ವಿಧಿಸಲಾಗಿದೆ’ ಎಂದು ನ್ಯಾಯಾಲಯವು ತಿಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ವೇಳೆಯೇ ನ್ಯಾಯಾಲಯದಲ್ಲಿ ವಾಮಾಚಾರ ಎಸಗಿ ಸರ್ಕಾರಿ ನೌಕರನಿಗೆ ಉದ್ದೇಶಪೂರ್ವಕವಾಗಿ ಅವಮಾನವೆಸಗಿದ ಆರೋಪಿ ವೈದ್ಯನಿಗೆ ಕಲಾಪ ಪೂರ್ಣಗೊಳಿಸುವವರೆಗೂ ನ್ಯಾಯಾಲಯದ ಕೊಠಡಿಯಲ್ಲಿ ಇರುವಂತೆ ತೀಜ್ ಹಜಾರಿ ನ್ಯಾಯಾಲಯವು ಸೂಚಿಸಿದೆ.</p>.<p>‘ವೃತ್ತಿಯಲ್ಲಿ ವೈದ್ಯರಾಗಿರುವ ಆರೋಪಿ ಡಾ. ಚಂದರ್ ವಿಭಾಸ್ ಅವರ ವರ್ತನೆಯು ಆಘಾತಕಾರಿಯಾಗಿದೆ. ಅತ್ಯಂತ ವಿದ್ಯಾವಂತ, ಗಣ್ಯವರ್ಗದವರಾಗಿ ವಿನಾಕಾರಣ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸಿದ್ದನ್ನು ಒಪ್ಪುವಂತಹದ್ದಲ್ಲ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶೆಫಾಲಿ ಬರ್ನಾಲ ಟಂಡನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p><br>2025ರ ಆಗಸ್ಟ್ 11ರಂದು ನ್ಯಾಯಾಲಯದ ಕಲಾಪದ ವೇಳೆ ಆರೋಪಿಯು ತಮ್ಮ ಮೇಲೆ ಅಕ್ಕಿ ಚೆಲ್ಲಿದ್ದನ್ನು ಸಿಬ್ಬಂದಿಯು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಇದರಿಂದ 15ರಿಂದ 20 ನಿಮಿಷಗಳ ಕಲಾಪ ನಡೆದಿರಲಿಲ್ಲ. ಆರೋಪಿ ಪರ ಹಾಜರಾಗಿದ್ದ ವಕೀಲರು ಕೂಡ ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದರು. ಈ ಕುರಿತು ಆರೋಪಿಯನ್ನು ವಿಚಾರಿಸಿದಾಗ, ಕೈಯಲ್ಲಿದ್ದ ಅಕ್ಕಿ ಕೆಳಗೆ ಚೆಲ್ಲಿತ್ತು ಎಂದು ತಿಳಿಸಿದ್ದರು. ಆದರೆ, ನ್ಯಾಯಾಲಯದ ಕಲಾಪಕ್ಕೆ ಅಕ್ಕಿ ಏಕೆ ತೆಗೆದುಕೊಂಡು ಬರಲಾಗಿತ್ತು ಎಂದು ತಿಳಿಸಿರಲಿಲ್ಲ.</p>.<p><strong>ಕ್ಷಮೆಯಾಚನೆ–ದಂಡ:</strong> ‘ತನ್ನ ನಡೆಯ ಕುರಿತು ಆರೋಪಿ ವೈದ್ಯನು ಪಶ್ಚಾತ್ತಾಪಪಟ್ಟಿದ್ದು, ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಕಲಾಪ ಮುಗಿಯುವವರೆಗೂ ನಿಲ್ಲುವಂತೆ ಸೂಚಿಸಿ, ₹2 ಸಾವಿರ ದಂಡ ವಿಧಿಸಲಾಗಿದೆ’ ಎಂದು ನ್ಯಾಯಾಲಯವು ತಿಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>