ಕೋಲ್ಕತ್ತ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಯಾವ ಪ್ರಭಾವಕ್ಕೂ ಒಳಗಾಗದೆ ಮುಕ್ತವಾಗಿ ತಮ್ಮ ಮತ ಚಲಾಯಿಸುವ ವಾತಾವರಣವನ್ನು ಚುನಾವಣಾ ಆಯೋಗ ಖಾತ್ರಿಪಡಿಸಲಿ ಎಂದು ಸಿಪಿಎಂ ಶನಿವಾರ ಕೇಳಿದೆ.
‘ಹಂತಗಳು ಮತ್ತು ಭದ್ರತಾ ಸಿಬ್ಬಂದಿಯ ಸಂಖ್ಯೆ ಮುಖ್ಯವಲ್ಲ; ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಯ ವಾತಾವರಣ ಮುಖ್ಯ ವಿಷಯವಾಗಿದೆ’ ಎಂದು ಸಿಪಿಎಂ ಪಕ್ಷದ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಹೇಳಿದ್ದಾರೆ.
2021ರ ವಿಧಾನಸಭೆ ಚುನಾವಣೆ ಮತ್ತು 2023ರ ಪಂಚಾಯಿತಿ ಚುನಾವಣೆಗಳ ವೇಳೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತದಾರರನ್ನು ಬೆದರಿಸಿ, ಚುನಾವಣೆಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆಸಿತ್ತು ಎಂದು ಎಡಪಕ್ಷ ಸೇರಿ ವಿಪಕ್ಷಗಳು ಆರೋಪ ಮಾಡಿದ್ದವು.