‘ಬಾಂಡ್ಗಳನ್ನು ಖರೀದಿಸಿದವರು ಮತ್ತು ಅದನ್ನು ಮಾರಿಕೊಂಡವರ ಬಗ್ಗೆ ಮಾಹಿತಿ ಹೊಂದಿಸುವ ಪ್ರಕ್ರಿಯೆಯಲ್ಲಿ ಹಲವು ತೊಂದರೆಗಳಿವೆ ಎಂದು ಹೇಳುವ ಮೂಲಕ ಎಸ್ಬಿಐ, ಸುಪ್ರೀಂ ಕೋರ್ಟ್ನ ಸೂಚನೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ ಹೇಳುತ್ತಿದೆ’ ಎಂದು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪಕ್ಷದ ಪರವಾಗಿ ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ತಿಳಿಸಿದ್ದಾರೆ.