ಕೇಂದ್ರ ಸರ್ಕಾರ ಈ ಸಂಬಂಧ ಕರಡು ಸಿದ್ಧಪಡಿಸಿದ್ದು, ವಿದ್ಯುತ್ ಚಾಲಿತ ವಾಹನಗಳ ಉಪಯೋಗ ಹೆಚ್ಚಳಕ್ಕಾಗಿ ಈ ನಿಯಮ ಜಾರಿಗೊಳಿಸಲಿದೆ.ಇದರಿಂದಾಗಿ ಹೆಚ್ಚುತ್ತಿರುವವಾಯುಮಾಲಿನ್ಯ ಕಡಿಮೆಯಾಗುವುದಲ್ಲದೆ, ಇಂಧನಕ್ಕಾಗಿ ಭಾರತ ಇತರೆ ದೇಶಗಳ ಮೇಲೆ ಅವಲಂಬಿತವಾಗುವುದು ಕ್ರಮೇಣ ಕಡಿಮೆಯಾಗುವುದು ಎಂದು ತಿಳಿಸಿದೆ. ಅಲ್ಲದೆ,2015ರಲ್ಲಿ ನಡೆದ ಪ್ಯಾರಿಸ್ ಒಪ್ಪಂದವನ್ನು ಭಾರತ ಪಾಲಿಸಿದಂತಾಗುತ್ತದೆ. ಈ ಒಪ್ಪಂದದಂತೆ ವಾಯುಮಾಲಿನ್ಯ ಕಡಿಮೆಗೊಳಿಸುವ ಸಂಬಂಧ ಉತ್ತೇಜನಕಾರಿ ನಿಯಮಗಳನ್ನು ಜಾರಿಗೆ ತರುವುದಾಗಿ ಭಾರತ ಸಹಿ ಮಾಡಿತ್ತು.