<p><strong>ಮಲಪ್ಪುರಂ:</strong> ಕೇರಳದ ತಿರೂರ್ ಬಳಿಯ ಮಸೀದಿಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆನೆಯೊಂದು ಬೆಚ್ಚಿದ ಪರಿಣಾಮ 23 ಜನರಿಗೆ ಗಾಯಗಳಾಗಿವೆ. </p><p>ಮಂಗಳವಾರ ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಬೆಚ್ಚಿದ ಆನೆ ವ್ಯಕ್ತಿಯೊಬ್ಬರನ್ನು ಸೊಂಡಲಿನಿಂದ ಎತ್ತಿ, ಎಸೆದಿದೆ. ಇದರಲ್ಲಿ ಗಾಯಗೊಂಡ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆನೆಯ ವರ್ತನೆ ಕಂಡು ಹೆದರಿದ ಜನರು ಓಡಿದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ ಉಳಿದ 22 ಮಂದಿಗೆ ಗಾಯಗಳಾಗಿವೆ. </p><p>ಧಾರ್ಮಿಕ ಕಾರ್ಯಕ್ರಮಕ್ಕಾಗಿ ಐದು ಆಲಂಕೃತ ಆನೆಗಳು ಸಜ್ಜಾಗಿದ್ದವು. ಇದರಲ್ಲಿ ಕೋಪಗೊಂಡ ಒಂದು ಆನೆ, ಎದುರಿಗಿದ್ದ ಜನರ ಮೇಲೆ ಎರಗಿದೆ. ಎದುರಿಗೆ ಸಿಕ್ಕ ಒಬ್ಬ ವ್ಯಕ್ತಿಯನ್ನು ಸೊಂಡಲಿನಿಂದ ಎತ್ತಿದ ಆನೆ, ತಿರುವಿ ಎಸೆದಿದೆ. </p><p>ಮಾವುತರ ನಿರಂತರ ಪ್ರಯತ್ನದಿಂದಾಗಿ ಕೆಲ ಹೊತ್ತಿನ ನಂತರ ಆನೆಯನ್ನು ಹತೋಟಿಗೆ ತರಲಾಯಿತು. ಕಾರ್ಯಕ್ರಮದಲ್ಲಿ ಆನೆಯನ್ನು ಬಳಸುವ ಕುರಿತು ಮಸೀದಿಯ ಆಡಳಿತ ಮಂಡಳಿ ಅನುಮತಿ ಪಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲಪ್ಪುರಂ:</strong> ಕೇರಳದ ತಿರೂರ್ ಬಳಿಯ ಮಸೀದಿಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆನೆಯೊಂದು ಬೆಚ್ಚಿದ ಪರಿಣಾಮ 23 ಜನರಿಗೆ ಗಾಯಗಳಾಗಿವೆ. </p><p>ಮಂಗಳವಾರ ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಬೆಚ್ಚಿದ ಆನೆ ವ್ಯಕ್ತಿಯೊಬ್ಬರನ್ನು ಸೊಂಡಲಿನಿಂದ ಎತ್ತಿ, ಎಸೆದಿದೆ. ಇದರಲ್ಲಿ ಗಾಯಗೊಂಡ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆನೆಯ ವರ್ತನೆ ಕಂಡು ಹೆದರಿದ ಜನರು ಓಡಿದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ ಉಳಿದ 22 ಮಂದಿಗೆ ಗಾಯಗಳಾಗಿವೆ. </p><p>ಧಾರ್ಮಿಕ ಕಾರ್ಯಕ್ರಮಕ್ಕಾಗಿ ಐದು ಆಲಂಕೃತ ಆನೆಗಳು ಸಜ್ಜಾಗಿದ್ದವು. ಇದರಲ್ಲಿ ಕೋಪಗೊಂಡ ಒಂದು ಆನೆ, ಎದುರಿಗಿದ್ದ ಜನರ ಮೇಲೆ ಎರಗಿದೆ. ಎದುರಿಗೆ ಸಿಕ್ಕ ಒಬ್ಬ ವ್ಯಕ್ತಿಯನ್ನು ಸೊಂಡಲಿನಿಂದ ಎತ್ತಿದ ಆನೆ, ತಿರುವಿ ಎಸೆದಿದೆ. </p><p>ಮಾವುತರ ನಿರಂತರ ಪ್ರಯತ್ನದಿಂದಾಗಿ ಕೆಲ ಹೊತ್ತಿನ ನಂತರ ಆನೆಯನ್ನು ಹತೋಟಿಗೆ ತರಲಾಯಿತು. ಕಾರ್ಯಕ್ರಮದಲ್ಲಿ ಆನೆಯನ್ನು ಬಳಸುವ ಕುರಿತು ಮಸೀದಿಯ ಆಡಳಿತ ಮಂಡಳಿ ಅನುಮತಿ ಪಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>