ಶಾಸಕ ಭಟ್ಕಳ್ಕರ್, ‘ವೈದ್ಯೆ ತಡ್ವಿ ಆತ್ಮಹತ್ಯೆ ಪ್ರಕರಣದ ಆರೋಪಿಗಳಾದ ಡಾ.ಹೇಮಾ ಅಹುಜಾ, ಡಾ.ಭಕ್ತಿ ಮೆಹ್ರ್ ಹಾಗೂ ಡಾ.ಅಂಕಿತಾ ಖಂಡೇಲ್ವಾಲಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ, ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಖಚಿತ ಎಂದರು.